Posts Slider

Karnataka Voice

Latest Kannada News

ಕಂಪ್ಲಿಕೊಪ್ಪದಲ್ಲಿ “ಅಂದರ್-ಬಾಹರ್”: ಕಿರೇಸೂರಲ್ಲಿ “ಮಟಕಾ”- 7 ಜನರ ಬಂಧನ…

1 min read
Spread the love

ಹುಬ್ಬಳ್ಳಿ: ಪೊಲೀಸರ ಕಣ್ಣು ತಪ್ಪಿಸಿ ಹುಬ್ಬಳ್ಳಿ ತಾಲೂಕಿನ ಕಂಪ್ಲಿಕೊಪ್ಪ ಗ್ರಾಮದಲ್ಲಿ ಜೂಜಾಟವಾಡುತ್ತಿದ್ದವರ ಹಾಗೂ ಕಿರೇಸೂರ ಗ್ರಾಮದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದವನ ಮೇಲೆ ದಾಳಿ ಮಾಡಿರುವ ಪೊಲೀಸರು ಏಳು ಜನರನ್ನ ಬಂಧನ ಮಾಡಿದ್ದಾರೆ.

ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಮುರುಗೇಶ ಚೆನ್ನಣ್ಣನವರ ಮಾರ್ಗದರ್ಶನದಲ್ಲಿ ದಾಳಿ ನಡೆದಿದೆ. ಕಂಪ್ಲಿಕೊಪ್ಪ ಗ್ರಾಮದಲ್ಲಿ ಆರು ಜನರನ್ನ ಬಂಧಿಸಿ 47210 ರೂಪಾಯಿಗಳನ್ನ ವಶಕ್ಕೆ ಪಡೆಯಲಾಗಿದೆ.

ಕಿರೇಸೂರದಲ್ಲಿ ಮಟಕಾ ಬರೆದುಕೊಳ್ಳುತ್ತಿದ್ದ ಓರ್ವನನ್ನ ಬಂಧನ ಮಾಡಿ, ಆತನಿಂದ 5150 ರೂಪಾಯಿಗಳನ್ನ ವಶಕ್ಕೆ ಪಡೆಯಲಾಗಿದೆ. ಗ್ರಾಮೀಣ ಠಾಣೆಯ ಪಿಎಸ್ಐಗಳಾದ ಸಚಿನ ಅಲಮೇಲಕರ, ಚಾಮುಂಡೇಶ್ವರಿ, ಎಎಸ್ಐಗಳಾದ ಎನ್.ಎಂ.ಹೊನ್ನಪ್ಪನವರ, ವೈ.ಜಿ.ಶಿವಮ್ಮನವರ, ಹೆಡ್‌ಕಾನ್ಸಟೇಬಲ್ ಎ.ಎ.ಕಾಕರ, ಪೇದೆಗಳಾದ ಚೆನ್ನಪ್ಪ ಬಳ್ಳೊಳ್ಳಿ, ಮಾಂತೇಶ ಮದ್ದಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *