ಕಮರಿಪೇಟೆ ಠಾಣೆಯಲ್ಲಿ “ಅಂಡಿಗೇಟು” ಕೊಟ್ಟ ASI ಪತ್ತಾರ್ ಸಸ್ಪೆಂಡ್…!!!

ಹುಬ್ಬಳ್ಳಿ: ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಕರೆದುಕೊಂಡು ಬಂದಿದ್ದ ಹವ್ಯಾಸಿ ಪತ್ರಕರ್ತನನ್ನ ಥಳಿಸಿದ್ದ ಆರೋಪದ ಹಿನ್ನೆಲೆಯಲ್ಲಿ ಎಎಸ್ಐ ಅವರನ್ನ ಅಮಾನತ್ತು ಮಾಡಿ ಪೊಲೀಸ್ ಕಮೀಷನರ್ ಆದೇಶ ಹೊರಡಿಸಿದ್ದಾರೆ.
ಭರತ ತುಳಜಾಸಾ ಕಾಟವೆ ಎಂಬುವವರನ್ನೇ ವಿನಾಕಾರಣ ಹೊಡೆಯಲಾಗಿದೆ ಎಂದು ಹೇಳಲಾಗಿದ್ದು, ಭರತ ಅವರ ಅಂಡಿಗೆ ಕೂಡಲು ಆಗದಂತೆ ಹೊಡೆಯಲಾಗಿದೆ.
ಈ ಕುರಿತು ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಪೊಲೀಸ್ ಆಯುಕ್ತರು ಅಮಾನತ್ತು ಮಾಡಿ, ಎಸಿಪಿ ಅವರಿಂದ ತನಿಖೆ ಮಾಡಲು ಆದೇಶಿಸಿದ್ದಾರೆ.
ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಜನರ ಹತ್ತಿರಕ್ಕೆ ಹೋಗುತ್ತಿದ್ದರೇ, ಕೆಲವರು ಈ ಥರ ಮಾಡುತ್ತಿರುವುದು ವಿಚಿತ್ರವೆನಿಸುತ್ತದೆ.