ಕಮರಿಪೇಟೆ ಪ್ರಕರಣ: ರಾತ್ರೋರಾತ್ರಿ ದಾಖಲಾಯಿತು ಎಫ್ ಐ ಆರ್- ಯಲ್ಲಪ್ಪ ಬದ್ದಿಯೀಗ ನಾಪತ್ತೆ
1 min readಹುಬ್ಬಳ್ಳಿ: ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ದಿವಟೆ ಗಲ್ಲಿಯಲ್ಲಿ ನಡೆದ ರೌಡಿಸಂ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಯೀಗ ನಾಪತ್ತೆಯಾಗಿದ್ದಾನಂತೆ.
ಆಗಷ್ಟ 27ರಂದು ರಾತ್ರಿ 10.15ಕ್ಕೆ ಅರುಣ ಹಚಡದ ಎಂಬುವರ ಮೇಲೆ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದ ಯಲ್ಲಪ್ಪ ಮತ್ತು ಆತನ 7 ಸಹಚರರ ಮೇಲೆ ನಾಲ್ಕು ದಿನದ ನಂತರ ರಾತ್ರಿ 11.15 ಕ್ಕೆ ಕಮರಿಪೇಟೆ ಠಾಣೆಯಲ್ಲೇ ಪ್ರಕರಣ ದಾಖಲಾಗಿದೆ.
ಪ್ರಮುಖ ಆರೋಪಿ ಯಲ್ಲಪ್ಪ ಬದ್ದಿ ಸೇರಿದಂತೆ 7 ಜನರ ಮೇಲೆ ಐಪಿಸಿ ಸೆಕ್ಷನ್ 1860 (143,147,323,504,506,427,149) ಪ್ರಕರಣಗಳನ್ನ ದಾಖಲು ಮಾಡಿದ್ದಾರೆ.
ಘಟನೆ ನಡೆದ ದಿನದಿಂದಲೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವಂತೆ ಅರುಣ ಕೇಳಿಕೊಂಡಿದ್ದರೂ ಕೂಡಾ ಎಫ್ ಐ ಆರ್ ದಾಖಲು ಮಾಡಿರಲಿಲ್ಲ. ಪ್ರಕರಣ ಹೊರ ಬಂದ ನಂತರ ರಾತ್ರೋರಾತ್ರಿ ಠಾಣೆಗೆ ತೆರಳಿದ ಡಿಸಿಪಿ ಕೃಷ್ಣಕಾಂತ ಸಮ್ಮುಖದಲ್ಲೇ ಪ್ರಕರಣ ದಾಖಲಾಗಿದೆ.
ಘಟನೆ ನಡೆದ ದಿನದಿಂದಲೂ ಅರುಣ ಹಚಡದ ಠಾಣೆಗೆ ಹೋಗಿದ್ದರೂ ಪ್ರಕರಣ ದಾಖಲು ಮಾಡಿಕೊಂಡಿರಲಿಲ್ಲ. ಯಾವಾಗಅರುಣ ತನಗೆ ಆಗಿರುವ ಅನ್ಯಾಯವನ್ನ ಬೇರೆಯವರ ಮುಂದೆ ಹೇಳಿಕೊಂಡನೋ ಆಗ ಪ್ರಕರಣ ದಾಖಲಾಗಿದೆ. ಅವತ್ತಿಂದ ಇದ್ದ ಆರೋಪಿ ಪ್ರಕರಣ ದಾಖಲಾದ ತಕ್ಷಣವೇ ಪರಾರಿಯಾಗಿದ್ದು, ಆರೋಪಿ ಇನ್ಯಾವಾಗ ಸಿಗುತ್ತಾನೋ ಎಂಬುದು ಯಕ್ಷಪ್ರಶ್ನೆಯಷ್ಟೇ..