ಧಾರವಾಡದಲ್ಲಿ “ಭಾರೀ ಕಳ್ಳತನ” 20 ಲಕ್ಷ ನಗದು, 35 ಲಕ್ಷದ ಚಿನ್ನ ದೋಚಿ ಪರಾರಿ…!!

ಧಾರವಾಡ: ನಗರದ ಬೀರೇಶ್ವರ ಕೋ ಆಪ್ರೇಟಿವ್ ಸೊಸಾಯಿಟಿಯಲ್ಲಿ ಸಲೀಸಾಗಿ ನುಗ್ಗಿರುವ ಕಳ್ಳರು, ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನ ದೋಚಿಕೊಂಡು ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಕೋರ್ಟ್ ಹಿಂಭಾಗದಲ್ಲಿರುವ ಶ್ರೀ ಬೀರೇಶ್ವರ ಕೋ ಆಪ್ ಕ್ರೇಡಿಟ್ ಸೊಸಾಯಿಟಿ ಲಿ.ಯಕ್ಸಂಬಾ ಶಾಖೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನ ಸುಟ್ಟು ಒಳನುಗ್ಗಿರುವ ಕಳ್ಳರು, 20 ಲಕ್ಷ ರೂಪಾಯಿ ನಗದು ಹಾಗೂ 35 ಲಕ್ಷ ರೂಪಾಯಿ ಮೌಲ್ತದ ಚಿನ್ನವನ್ನ ದೋಚಿದ್ದಾರೆಂದು ಹೇಳಲಾಗಿದೆ.
ಸಿಸಿಟಿವಿ ಕ್ಯಾಮರಾದ ಡಿವಿಆರ್ನ್ನೂ ಸುಟ್ಟು ಹೋಗಲಾಗಿದೆ ಎನ್ನಲಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.