Posts Slider

Karnataka Voice

Latest Kannada News

ಮುಚ್ಚಿದ ದೇವಸ್ಥಾನದ ಹುಂಡಿ ಕಳ್ಳತನ: ಕೊರೋನಾ ಸಮಯವನ್ನೂ ಬಿಡದ ಚೋರರು

Spread the love

ಹಾವೇರಿ: ಕರೋನಾ ಕೋವಿಡ್ ಭೀತಿ ಹಿನ್ನೆಲೆಯಲ್ಲಿ ತಿಂಗಳಿನಿಂದ ಬಾಗಿಲು ಮುಚ್ಚಿದ ದೇವಸ್ಥಾನಗಳನ್ನೇ ಟಾರ್ಗೆಟ್ ಮಾಡಿರುವ ಚೋರರು, ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿನ ಶಕ್ತಿ ದೇವತೆ ಚೌಡೇಶ್ವರಿ ದೇವಿ ಅಮ್ಮನವರ ದೇವಸ್ಥಾನದಲ್ಲಿ ಹುಂಡಿ ಕಳ್ಳತನ ಮಾಡಿದ್ದಾರೆ.

ದೇವಸ್ಥಾನ ದ ಬಳಿ ಭಕ್ತರು ಬಾರದೇ ಇರುವುದನ್ನೇ ಕಳ್ಳರು ಬಳಕೆ ಮಾಡಿಕೊಂಡು ತಮ್ಮ ಕೈ ಚಳಕ ತೋರಿಸಿದ್ದಾರೆ. ದೇವಸ್ಥಾನದ ಬಾಗಿಲು ಮುರಿದು, ಸಿಸಿ ಕ್ಯಾಮರಾ ದ್ವಂಸ ಮಾಡಿ ಕಳ್ಳತನ ಮಾಡಿದ್ದಾರೆ.ಲಕ್ಷಾಂತರ ರೂಪಾಯಿ ಕಳ್ಳತನ ಮಾಡಿರುವ ಶಂಕೆವ್ಯಕ್ತವಾಗಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Your email address will not be published. Required fields are marked *