Posts Slider

Karnataka Voice

Latest Kannada News

ಮಧ್ಯ ಸಿಗದ ಹಿನ್ನೆಲೆ: ಕಳ್ಳಬಟ್ಟಿ ತಯಾರಿಕೆಗೆ ಮುಂದಾದ ದುರುಳರು

Spread the love

ಚಾಮರಾಜನಗರ: ವೈನ್ ಶಾಪ್ ಬಂದಾಗಿರುವ ಪರಿಣಾಮ ಜಿಲ್ಲೆಯಲ್ಲಿ ಹಲವರು ಕಳ್ಳಬಟ್ಟಿ ತಯಾರಿಕೆ ಆರಂಭಿಸಿದ್ದು, ಈಗಾಗಲೇ ನಾಲ್ಕು ಪ್ರಕರಣಗಳು ಬಯಲಿಗೆ ಬಂದಿದ್ದು, ನೂರಾರೂ ಲೀಟರ್ ಕಳ್ಳಬಟ್ಟಿ ಸಾರಾಯಿ ನಾಶ ಮಾಡಲಾಗಿದೆ.

ಜಿಲ್ಲೆಯ ಹನೂರು ತಾಲೂಕಿನಲ್ಲಿ 24ಗಂಟೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಿರುವ ಅಬಕಾರಿ ಇನ್ಸ್ ಪೆಕ್ಟರ್ ಮೀನಾ, ಸಬ್ ಇನ್ಸ್ ಪೆಕ್ಟರ್ ಮನೋಜಕುಮಾರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕೋಟಪೊದ್ದೆ ಗ್ರಾಮದ ರವಿ, ಚಂದ್ರನಾಯ್ಕ ಮತ್ತು ರಾಜೇಂದ್ರ ನಾಯ್ಕ ಎಂಬುವವರನ್ನ ಬಂಧನ ಮಾಡಲಾಗಿದೆ.

ಕೂಲಿ ಕಾರ್ಮಿಕರೇ ಹೆಚ್ಚಿರುವ ಪ್ರದೇಶದಲ್ಲಿ ನಿರಾಂತಕವಾಗಿ ಕಳ್ಳಬಟ್ಟಿ ಸಿದ್ಧ ಮಾಡುತ್ತಿದ್ದರು. ಖಚಿತ ಮಾಹಿತಿ ಪಡೆದು ದಾಳಿ ಮಾಡಿ, ತಯಾರಿಕಾ ಘಟಕವನ್ನ ನಾಶ ಮಾಡಲಾಗಿದೆ.


Spread the love

Leave a Reply

Your email address will not be published. Required fields are marked *