ಕಲಘಟಗಿ, ಅಳ್ನಾವರ, ಅಣ್ಣಿಗೇರಿ “ಬರ ತಾಲೂಕು” ಎಂದು ಘೋಷಣೆ- ಸಚಿವ ಸಂತೋಷ ಲಾಡ ಯಶಸ್ಸು…

ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ 21 ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಿ ಆದೇಶ ಹೊರಡಿಸಿದ್ದು, ಧಾರವಾಡ ಜಿಲ್ಲೆಯ ಉಳಿದ ಮೂರು ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಿಸುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಯಶ ಸಾಧಿಸಿದ್ದಾರೆ
ಧಾರವಾಡ ಜಿಲ್ಲೆಯ ಮೂರು ತಾಲೂಕುಗಳನ್ನ ಎನ್ಡಿಆರ್ಎಫ್ ನಿಯಮ ಬರದ ಹಿನ್ನೆಲೆಯಲ್ಲಿ ಈ ಹಿಂದೆ ಘೋಷಣೆ ಮಾಡಿದ್ದ ತಾಲೂಕುಗಳಲ್ಲಿ ಸೇರ್ಪಡೆ ಆಗಿರಲಿಲ್ಲ. ಈ ಕಾರಣಕ್ಕೆ ಕೆಲವರು ಹೋರಾಟ ನಡೆಸಿದ್ದರು.
ಸಚಿವ ಸಂತೋಷ ಲಾಡ ಅವರು ಈ ಮೂರು ತಾಲೂಕಿನಲ್ಲಿರುವ ತೊಂದರೆ ಮತ್ತೂ ರೈತರ ಸಂಕಷ್ಟವನ್ನ ತಿಳಿಸಿ, ಮೂರು ತಾಲೂಕಿನ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.