ಇನ್ಸಪೆಕ್ಟರ್ ಪ್ರಭು ಸೂರಿನ್ ಆಡೀಯೋ ವೈರಲ್…! ಕಲಘಟಗಿಯಲ್ಲಿ ನಡೆಯುತ್ತಿರುವುದೇನು…!

ಧಾರವಾಡ: ಮಾಹಿತಿ ನೀಡಿದವರನ್ನೇ ಪೊಲೀಸ್ ಇನ್ಸಪೆಕ್ಟರ್ ಪ್ರಭು ಸೂರಿನ್ ಹೊಡೆದಿದ್ದಾರೆ. ಅವರನ್ನ ಅಮಾನತ್ತು ಮಾಡಿ ಎಂದು ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ, ಇನ್ಸಪೆಕ್ಟರ್ ಜೊತೆ ಸಂಘಟನೆಯೊಂದರ ಮುಖಂಡರು ಮಾತನಾಡಿರೋ ಆಡಿಯೋ ವೈರಲ್ ಆಗಿದ್ದು, ತಪ್ಪು ಯಾರು ಮಾಡಿದ್ದಾರೆಂಬ ಸಂಶಯ ಮೂಡುವಂತಾಗಿದೆ.
ಡೇವಿಡ್ ದೂಪದ ಎಂಬ ವ್ಯಕ್ತಿಯ ಹತ್ತಿರ ಅಕ್ರಮವಾಗಿ ಶಸ್ತ್ರಾಸ್ತ್ರ ಸಿಕ್ಕಿದೆ. ಹಾಗಾಗಿಯೇ ಹಿಡಿದಿದ್ದು, ಸುಖಾಸುಮ್ಮನೆ ಹೊಡೆಯಲು ಬರುವುದಿಲ್ಲವೆಂದು ಸಕರಾತ್ಮಕವಾಗಿ ಇನ್ಸಪೆಕ್ಟರ್ ಪ್ರಭು ಸೂರಿನ್ ಮಾತನಾಡುತ್ತ ಹೋಗುತ್ತಾರೆ. ಆದರೆ, ಮುಂದಿನ ಧ್ವನಿಯೂ ಅದಕ್ಕೆ ವ್ಯತಿರಿಕ್ತವಾದ ಮಾತುಗಳನ್ನ ಆಡುತ್ತ ಹೋಗುತ್ತಾರೆ.
ಘಟನೆಯ ಬಗ್ಗೆ ಈಗಾಗಲೇ, ಕೆಲವು ಆರೋಪಗಳು ಬಂದಿದ್ದವು. ಅಷ್ಟೇ ಅಲ್ಲ, ಇನ್ಸಪೆಕ್ಟರ್ ಪ್ರಭು ಸೂರಿನ ಅವರ ವಿರುದ್ಧ ಕಾನೂನು ಕ್ರಮವನ್ನ ಜರುಗಿಸುವಂತೆ ಒತ್ತಾಯಿಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ, ಪ್ರತಿಭಟನೆಯೂ ನಡೆದಿತ್ತು.
ಈ ಆಡೀಯೋದಿಂದ ಪ್ರಕರಣ ಮತ್ಯಾವ ಸ್ವರೂಪವನ್ನ ಪಡೆದುಕೊಳ್ಳುತ್ತೆ ಎಂಬುದನ್ನ ಕಾದು ನೋಡಬೇಕಿದೆ.