ಕಲಘಟಗಿಯ ತಂಬೂರಿನ “ದನದಕ್ಕಿ”ಯಲ್ಲಿ ಬೆಂಕಿ: 7 ಜಾನುವಾರುಗಳು ಸಜೀವ ದಹನ…

ಕಲಘಟಗಿ: ಊರ ಹೊರವಲಯದಲ್ಲಿನ ದನದ ಕೊಟ್ಟಿಗೆಯಲ್ಲಿ ಸಂಶಯಾಸ್ಪದ ರೀತಿಯಲ್ಲಿ ಬೆಂಕಿ ತಗುಲಿ ಏಳು ಜಾನುವಾರುಗಳು ಸಜೀವ ದಹನವಾದ ಘಟನೆ ಕಲಘಟಗಿ ತಾಲೂಕಿನ ತಂಬೂರ ಗ್ರಾಮದಲ್ಲಿ ಸಂಭವಿಸಿದೆ.
ಬೆಂಕಿ ತಗುಲಿರುವ ಎಕ್ಸಕ್ಲೂಸಿವ್ ವೀಡಿಯೋ..
ತಂಬೂರ ಗ್ರಾಮದ ಯಲ್ಲಪ್ಪ ಸಿದ್ದಪ್ಪ ಹುಡೇದ ಎಂಬುವವರಿಗೆ ಸೇರಿದ ಜಾನುವಾರುಗಳು ಸಾವಿಗೀಡಾಗಿದ್ದು, ಒಂದು ದನ ಪರಾರಿಯಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳಕ್ಕೆ ಅಗ್ನಿಶಾಮಕ ದಳ ಬಂದರೂ ಯಾವುದೇ ಪ್ರಯೋಜನವಾಗಿಲ್ಲ.