Karnataka Voice

Latest Kannada News

ಕಲಘಟಗಿಯ ದೇವಿಕೊಪ್ಪದ ಬಳಿ ಕರಡಿ ದಾಳಿ- ರೈತನ ತಲೆ ಛಿದ್ರ…!!!

Spread the love

ಧಾರವಾಡ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ಕರಡಿಯೊಂದು ದಾಳಿ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ದೇವಿಕೊಪ್ಪ ತಾಂಡಾದ ಬಳಿ ಸಂಭವಿಸಿದ್ದು, ರೈತನ ಸ್ಥಿತಿ ಗಂಭೀರವಾಗಿದೆ.
ದೇವಿಕೊಪ್ಪ ತಾಂಡಾದ ರೈತ ಮಾರುತಿ ಮೇಲೆ ಕರಡಿ ದಾಳಿ ಮಾಡಿದ್ದು, ಮಾರುತಿ ತಲೆಗೆ ಗಂಭೀರ ಗಾಯಗಳಾಗಿವೆ. ತಲೆಭಾಗ ಛಿದ್ರವಾಗಿ, ಅತೀವ ರಕ್ತಸ್ರಾವವಾಗಿದೆ.


ಗಾಯಾಳು ಮಾರುತಿಯನ್ನ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತರಲಾಗಿದ್ದು, ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯೂ ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ.


Spread the love

Leave a Reply

Your email address will not be published. Required fields are marked *