Posts Slider

Karnataka Voice

Latest Kannada News

ಕಲಘಟಗಿ ಕಾಂಗ್ರೆಸ್ ನಲ್ಲಿ ತಾಳಿಲ್ಲಾ-ಮೇಳಿಲ್ಲಾ: ಸಂತೋಷ ಲಾಡ್ ವಿರುದ್ಧ ಷಢ್ಯಂತ್ರ..! ವಾಟ್ಸಾಫ್ ಗ್ರೂಫಲ್ಲಿ ಜೈ.. ಜೈ.. !

1 min read
Spread the love

ಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ ಸೋತ ನಂತರ ಹಲವು ಬಾರಿ ಕ್ಷೇತ್ರಕ್ಕೂ ಬಂದಿದ್ದರೂ ಕೆಲವು ಕಾಂಗ್ರೆಸ್ಸಿಗರೇ ಗೊಂದಲ ಸೃಷ್ಟಿ ಮಾಡುತ್ತಿರುವುದು ಇದೀಗ ಮತ್ತಷ್ಟು ಬಹಿರಂಗಗೊಂಡಿದೆ. ಯಾರೂ ಇಂತಹದಕ್ಕೆ ಕಾರಣ ಎಂಬುದು ಈ ವರದಿಯನ್ನ ಪೂರ್ಣವಾಗಿ ಓದಿದಾಗ ತಮಗೆ ತಿಳಿಯತ್ತೆ.

ಮಾಜಿ ಸಂತೋಷ ಲಾಡ ಕಲಘಟಗಿ ಕ್ಷೇತ್ರದಲ್ಲಿ ಸೋತ ನಂತರ ಕಾಂಗ್ರೆಸ್ಸಿನ ನಾಗರಾಜ ಛಬ್ಬಿ ಕ್ಷೇತ್ರದ ಹಲವು ಭಾಗಗಳಲ್ಲಿ ಜನ ಸಭೆಗಳನ್ನ ಮಾಡಲು ಆರಂಭಿಸಿದರು. ಇದೇ ಕಾರಣಕ್ಕೆ ಮತ್ತೆ ಲಾಡ ಕ್ಷೇತ್ರಕ್ಕೆ ಬರೋದಿಲ್ಲ ಎಂಬ ವದಂತಿಗಳು ಹಬ್ಬತೊಡಗಿದವು.

ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸುವ ಪೋಟೊಗಳು ಕ್ಷೇತ್ರದಲ್ಲಿ ಉದ್ದೇಶಪೂರ್ವಕವಾಗಿ ಹರಿಬಿಡಲಾಯಿತು. ಇದೇ ಕಾರಣಕ್ಕೆ ಕಲಘಟಗಿ ಕಾಂಗ್ರೆಸ್ ಪಕ್ಷದ ವಾಟ್ಸಾಫ್ ಗ್ರೂಫಲ್ಲಿ ಕೆಲವರನ್ನ ಹೊರ ಹಾಕಲಾಯಿತು. ಇದರಿಂದ ಬೇಸತ್ತ ನಾಗರಾಜ ಛಬ್ಬಿ ಬೆಂಬಲಿಗ ಕಿರಣ ಪಾಟೀಲ, “ಕೆಲವರು ಬೇರೆ ಗ್ರೂಫನಲ್ಲಿ ಛಬ್ಬಿ ಅವರ ಬಗ್ಗೆ ಪೋಸ್ಟ್ ಮಾಡಿದರೇ ಅವರನ್ನ ಗ್ರೂಪಿನಿಂದ ತೆಗೆಯುವ ಸಂಪ್ರದಾಯ ರೂಢಿಸಿಕೊಂಡಿದ್ದಾರೆ… “ ಎಂದು ಬರೆದು ಹಾಕಿ ಗ್ರೂಫಿಂದ ಹೊರಗೆ ಹೋಗಿದ್ದಾರೆ. ಅಷ್ಟೇ ಅಲ್ಲ, ಜೈ ಕಾಂಗ್ರೆಸ್ ಜೈ ನಾಗರಾಜ ಛಬ್ಬಿ ಎಂದು ಬರೆದುಕೊಂಡಿದ್ದಾರೆ.

ತಕ್ಷಣವೇ ಎಚ್ಚೇತ್ತ ಕಾಂಗ್ರೆಸ್ ಮುಖಂಡ ನಿಂಗರೆಡ್ಡಿ, “ ಮುಂದಿನ ಚುನಾವಣೆಯಲ್ಲಿ ಸಂತೋಷ ಲಾಡ ಅವರೇ ಸ್ಪರ್ಧೆ ಮಾಡುತ್ತಾರೆ.. “ ಎನ್ನುತ್ತಲೇ ಜೈ ಕಾಂಗ್ರೆಸ್ ಜೈ ಸಂತೋಷ ಲಾಡ ಎಂದು ಬರೆದುಕೊಂಡಿದ್ದಾರೆ.


Spread the love

Leave a Reply

Your email address will not be published. Required fields are marked *