ಕಲಘಟಗಿಯ ಜಮ್ಮಿಹಾಳ ಗ್ರಾಮದಲ್ಲಿ ಸಹೋದರನನ್ನ ಕೊಲೆ ಮಾಡಿದ ರವಿ…!

ಕಲಘಟಗಿ: ಆಸ್ತಿಯ ವಿಚಾರವಾಗಿ ಚಿಕ್ಕಪ್ಪನ ಮಗನಿಂದಲೇ ವ್ಯಕ್ತಿಯೋರ್ವನ ಕೊಲೆಯಾದ ಘಟನೆ ಕಲಘಟಗಿ ತಾಲೂಕಿನ ಜಮ್ಮಿಹಾಳ ಗ್ರಾಮದಲ್ಲಿ ಸಂಭವಿಸಿದೆ.

ಕಳೆದ ರಾತ್ರಿ 39 ವಯಸ್ಸಿನ ಮೈಲಾರಿ ಜಮ್ಮಿಹಾಳ ಎಂಬುವರನ್ನ ಈತನ ಚಿಕ್ಕಪ್ಪನ ಮಗ ರವಿ ತೀರ್ಲಾಪು ಎಂಬಾತ ಹರಿತವಾದ ಕುಡಗೋಲಿನಿಂದ ಎಲ್ಲೆಂದರಲ್ಲಿ ಹೊಡೆದು ತೀವ್ರವಾಗಿ ಶುಕ್ರವಾರ ರಾತ್ರಿ ಗಾಯಗೊಳಿಸಿದ್ದ.
ತೀವ್ರವಾದ ಗಾಯಗಳಿಂದ ಬಳಲುತ್ತಿದ್ದ ಮೈಲಾರಿಯನ್ನ ಚಿಕಿತ್ಸೆಗಾಗಿ ಆಸ್ಪತ್ರೆಗಾಗಿ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ಮೈಲಾರಿ ಶನಿವಾರ ಮಧ್ಯಾಹ್ನ ಸಾವಿಗೀಡಾಗಿದ್ದಾನೆ.
ಕೊಲೆ ಮಾಡಿರುವ ಆರೋಪಿ ರವಿ ತೀರ್ಲಾಪುರ ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಕಲಘಟಗಿ ಠಾಣೆಯ ಪೊಲೀಸರು ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಒಂದು ಎಕರೆ ಭೂಮಿಗಾಗಿ ರವಿ, ತನ್ನ ಸಹೋದರನನ್ನೇ ಕೊಲೆ ಮಾಡಿದ್ದು ವಿಪರ್ಯಾಸ. ಜಮೀನಿನ ಸಂಬಂಧವಾಗಿ ಈ ಹಿಂದೆಯೂ ಹಲವು ಬಾರಿ ಗಲಾಟೆಗಳು ನಡೆದಿದ್ದವು ಎಂದು ಹೇಳಲಾಗಿದೆ.