ಜೆಡಿಎಸ್ ಶಾಸಕರ ಕುಟುಂಬದವರಿಗೆ ಕೊರೋನಾ: ಆತಂಕದಲ್ಲಿ ಬೆಂಬಲಿಗರು
1 min readರಾಯಚೂರು: ಸಿಂಧನೂರು ವಿಧಾನ ಸಭಾ ಕ್ಷೇತ್ರದ ಶಾಸಕ ವೆಂಕಟರಾವ್ ನಾಡಗೌಡ ಅವರ ಕುಟುಂಬಕ್ಕೂ ಸೋಂಕು ತಗುಲಿದೆ. ಶಾಸಕರ ಸಹೋದರ ಬಸವರಾಜ್ ನಾಡಗೌಡ ಅವರಿಗೆ ಕರೋನ ಸೋಂಕು ತಗುಲಿದೆ.
ಇಂದು ಬಸವರಾಜ್ ನಾಡಗೌಡ ರಾಯಚೂರಿನ ಕೋವಿಡ್ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಬಸವರಾಜ್ ನಾಡಗೌಡ ಅವರು ಶಾಸಕ ವೆಂಕಟರಾವ್ ನಾಡಗೌಡ ಅವರ ಜೊತೆಯಲ್ಲಿ ಇದ್ದು ಕ್ಷೇತ್ರದ ಆಗು ಹೋಗುಗಳ ಬಗ್ಗೆ ಗಮನಹರಿಸುತ್ತಿದ್ದರು. ಈ ಸಂದರ್ಭದಲ್ಲಿ ಶಾಸಕರನ್ನು ಭೇಟಿ ಆಗಲು ಬಂದವರು ಬಸವರಾಜ್ ನಾಡಗೌಡ ರನ್ನು ಬೇಟಿಯಾಗಿದ್ದರು. ಹೀಗಾಗಿ ಶಾಸಕರ ಹಿಂಬಾಲಕರಿಗೆ, ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಸೃಷ್ಟಿಯಾಗಿದೆ.
ಬಸವರಾಜರು ಆಸ್ಪತ್ರೆಗೆ ದಾಖಲಾದ ನಂತಅವರೊಂದಿಗೆ ಸಂಪರ್ಕ ಹೊಂದಿದವರ ಮಾಹಿತಿಯನ್ನ ಕಲೆ ಹಾಕಿ, ಅವರಿಗೂ ಕೊರೋನಾ ಟೆಸ್ಟ್ ನಡೆಸುವ ನಿರೀಕ್ಷೆಯಿದೆ.