Posts Slider

Karnataka Voice

Latest Kannada News

“ಶಾಲೆ-ದೇವಸ್ಥಾನ-ಸ್ಮಶಾನ” ಇಲ್ಯಾವತ್ತು ಜಾತಿ ಕಾಣಬಾರ‌ದು: ಹಿಂದು ಪೈರ್ ಬ್ರ್ಯಾಂಡ್ ಜಯತೀರ್ಥ ಕಟ್ಟಿ…

1 min read
Spread the love

ಹುಬ್ಬಳ್ಳಿ: ಸಮಾಜದಲ್ಲಿ ಮೂರು ಸ್ಥಳಗಳಲ್ಲಿ ಅನುಮತಿ ಪಡೆದು ಹೋಗುವಂತೆ ಆಗಬಾರದು. ಅಸ್ಪೃಶ್ಯತೆ ನಾಶವಾಗಬೇಕೆಂದು ಹಿಂದು ಮುಖಂಡ ಜಯತೀರ್ಥ ಕಟ್ಟಿ ಅವರು ಹೇಳಿದರು.
ಹುಬ್ಬಳ್ಳಿಯ ವಾಸವಿ ಕಲ್ಯಾಣ ಮಂಟಪದಲ್ಲಿ ನಡೆದ ಮನೆಗೆದ್ದ ಮನೆ ಗಣಪಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಜಯತೀರ್ಥ ಕಟ್ಟಿಯವರು ಮಾತನಾಡುತ್ತಿದ್ದರು. ಸಮಾಜದಲ್ಲಿ ನಡೆಯುತ್ತಿರುವ ಜಾತಿ ವ್ಯವಸ್ಥೆಯನ್ನ ತೀಕ್ಷ್ಣವಾಗಿ ಕುಟುಕಿದರು.

ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ…

ಮೇಲು-ಕೀಳು ಎಂಬ ಮನೋಭಾವನೆಯಿಂದ ಹೊರಗೆ ಬರಬೇಕು. ಬಿಜೆಪಿ ಸಮಾಜವನ್ನ ಒಗ್ಗೂಡಿಸುತ್ತ ಮುನ್ನಡೆಯುತ್ತದೆ. ಎಲ್ಲರೂ ಒಂದಾಗಿ ದೇಶ ಪ್ರೇಮವನ್ನ ಬೆಳೆಸಿಕೊಳ್ಳಬೇಕಿದೆ ಎಂದರು.
ಪರಮಪೂಜ್ಯ ಶ್ರೀ ಷಡಕ್ಷರಿ ಸ್ವಾಮೀಜಿ, ಶಾಸಕ ಮಹೇಶ ಟೆಂಗಿನಕಾಯಿ, ಸುಭಾಸಸಿಂಗ್ ಜಮಾದಾರ, 52ನೇ ವಾರ್ಡಿನ ಅಧ್ಯಕ್ಷ ಹರೀಶ ಜಗ್ಲಿ, ಡಾ.ರಾಮು ಮೂಲಗಿ, ನಾಯ್ಕರ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Spread the love

Leave a Reply

Your email address will not be published. Required fields are marked *