ಜೈ ಭೀಮ ಸಂಘರ್ಷ ಸಮಿತಿ-ಪದಾಧಿಕಾರಿಗಳ ಪದಗ್ರಹಣ
1 min readಹುಬ್ಬಳ್ಳಿ: ಜೈ ಭೀಮ ಸಂಘರ್ಷ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಗರದಲ್ಲಿಂದು ನಡೆಯಿತು. ಕಾರ್ಯಕ್ರಮದಲ್ಲಿ ಪದಗ್ರಹಣ ಮಾಡಿದ ನಂತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು.
ಜೈ ಭೀಮ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಬಸಂತಕುಮಾರ್ ಅನಂತಪುರ ಅವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪದಗ್ರಹಣ ಕಾರ್ಯಕ್ರಮ ನೆರವೇರಿತು.
ಧಾರವಾಡ ಜಿಲ್ಲೆಯ ಅಧ್ಯಕ್ಷರಾಗಿ ಸುರೇಶಕುಮಾರ.ಎಂ, ಕಾರ್ಯದರ್ಶಿಯಾಗಿ ಶಂಕರ್ ಕನಂಗಾನಪಲಿ, ಉಪಾಧಕ್ಷರಾಗಿ ಹನುಮಂತ ಪೂಲ ಪದಗ್ರಹಣ ಮಾಡಿದರು.
ಹುಬ್ಬಳ್ಳಿ ಶಹರ ಘಟಕ
ಹುಬ್ಬಳ್ಳಿ ಶಹರ ಅಧ್ಯಕ್ಷ
ಭಾಸ್ಕರ್ ಮುತ್ತಗಿ
ಕಾರ್ಯದರ್ಶಿ
ವಿನಾಯಕ ಗುಂಡಮನವರ
ಧಾರವಾಡ ಶಹರ ಮಹಿಳಾ ಘಟಕ
ಮಮತಾ ಬೆಳಗಾಂವಕರ್
ಹಾಗೂ ಉತ್ತರ ಕರ್ನಾಟಕ ಸಂಚಾಲಕರಾಗಿ ಗುರುನಾಥ ಶಿವರಾಜ ಆದೇಶ ಪತ್ರವನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸರ್ವನ್, ಮನೋಹರ್ ಕಲ್ಯಾಣಿ, ನಾಗರಾಜ್ ಜಾಲಿಗಿಡದ, ಹರಿಶ್ಚಂದ್ರ, ಅಶೋಕ ಹಾದಿಮನಿ, ಶ್ರೀನಿವಾಸ್ ಬೂದಗಟಿ, ಪರಶುರಾಮ ಗೋಕಾಕ್ , ಮಂಜುನಾಥ, ವಿಜಯಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.