ಪಿಎಸ್ಐ ಹಲ್ಲೆ ಪ್ರಕರಣ- ಕಮೀಷನರ್ ಜೊತೆ ಸಭೆ: ಸಚಿವ ಜಗದೀಶ ಶೆಟ್ಟರ…!

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಸುಖಾನಂದ ಶಿಂಧೆ ಕಾರ್ಮಿಕನ ಮೇಲೆ ಹಲ್ಲೆ ಮಾಡಿರುವ ವಿಚಾರ ತಮಗೆ ಗೊತ್ತಾಗಿದೆ. ಆ ಬಗ್ಗೆ ಕಮೀಷನರ್ ಜೊತೆ ಮಾತನಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

ನಗರದಲ್ಲಿಂದು ಮಾತನಾಡಿದ ಸಚಿವ ಶೆಟ್ಟರ ಅವರು, ಪಿಎಸ್ಐ ಮಾಡಿರುವ ಹಲ್ಲೆಯ ಬಗ್ಗೆ ವಿವರವಾಗಿ ಗೊತ್ತಿದೆ. ಪೊಲೀಸ್ ಕಮೀಷನರ್ ಬರುತ್ತಿದ್ದಾರೆ. ಅವರ ಜೊತೆ ಮಾತಾಡಿ, ಹೇಳುವೆ ಎಂದರು.
ಕಳೆದ ವರ್ಷವೂ ಲಾಕ್ ಡೌನ್ ವೇಳೆಯಲ್ಲಿ ಪಾಲಿಕೆ ಅಧಿಕಾರಿಯನ್ನೂ ಹೊಡೆದ ಬಗ್ಗೆಯೂ ಜಿಲ್ಲಾ ಉಸ್ತುವಾರಿ ಸಚಿವರು ಇದೇ ಸಮಯದಲ್ಲಿ ಮಾಹಿತಿಯನ್ನ ಪಡೆದರು.
ಗುಡಿಹಾಳ ರಸ್ತೆಯಲ್ಲಿ ನಿಗದಿತ ಸಮಯದಲ್ಲಿಯೇ ಮನೆಗೆ ತೆರಳುವ ಸಮಯದಲ್ಲಿ ಕಾರ್ಮಿಕನ ಮೇಲೆ ಹಲ್ಲೆ ಮಾಡಿದ್ದರಿಂದ, ತೀವ್ರವಾಗಿ ಗಾಯಗೊಂಡವರನ್ನ ಚಿಕಿತ್ಸೆಗಾಗಿ ಕಿಮ್ಸಗೆ ದಾಖಲು ಮಾಡಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.