Ex CM ‘ಜಗದೀಶ’ ಶೆಟ್ಟರ ಪ್ರಚಾರಕ್ಕೆ ‘ಪಾರ್ವತಿ’- “ಹಂಗೀಂಗ್” ಅನ್ನೋರಿಗೆ “ಪಟ ಪಟ” ಉತ್ತ್ರಾ…!!!

ಹುಬ್ಬಳ್ಳಿ: ವಿಧಾನಸಭೆ ಚುನಾವಣೆಗೆ ಇನ್ನೇನು ಹಲವು ದಿನಗಳು ಬಾಕಿ ಇರುವಾಗಲೇ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಕೂಡಾ, ತಾವೂ ಮಾಡಿದ ಕೆಲಸಗಳ ಪ್ರಚಾರವನ್ನ ಆರಂಭಿಸಿದ್ದಾರೆ. ಅವರು ಆಯ್ಕೆ ಮಾಡಿಕೊಂಡಿದ್ದು ಪಟ ಪಟ ಪಾರ್ವತಿ ಎಂಬ ಕಾರ್ಟೂನ್ನ್ನ.
ಹೌದು… ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸುವ ಬಿಆರ್ಟಿಎಸ್ ಚಿಗರಿ ಬಸ್ ಯೋಜನೆಯನ್ನ ಜಾರಿಗೆ ಮಾಡಿದ್ದು ತಾವು ಎಂಬುದನ್ನ ಸಾಮಾಜಿಕ ಜಾಲತಾಣದ ಮೂಲಕ ಪ್ರಚಾರ ಆರಂಭಿಸಿದ್ದಾರೆ.
ಆ ವೀಡಿಯೋ ಝಲಕ ಇಲ್ಲಿದೆ ನೋಡಿ…
ಸ್ವ ಪಕ್ಷದ ಶಾಸಕ ಅರವಿಂದ ಬೆಲ್ಲದ ಅವರು ಹಲವು ಬಾರಿ ಈ ಯೋಜನೆಯನ್ನ ಟೀಕಿಸಿದ್ದರು. ಹೀಗಾಗಿ ತಮ್ಮ ಮೊದಲ ಪ್ರಚಾರವನ್ನ ಅದೇ ಬಿಆರ್ಟಿಎಸ್ ಮೂಲಕ ಮಾಡುತ್ತಿರುವುದು, ಎದುರಾಳಿಗಳಿಗೆ ತಕ್ಕ ಉತ್ತರ ನೀಡಲು ಸಿದ್ಧಗೊಂಡಿದ್ದಾರೆ.