ಜಗದೀಶ ಶೆಟ್ಟರಗೆ ಸಿನಿಯಾರೀಟಿ ಪ್ರಾಬ್ಲಂ: ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ನಾನಿರೋಲ್ಲ ಎಂದ್ರು…

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಾನು ಮಂತ್ರಿಯಾಗೋದಕ್ಕೆ ಕಾರಣವಿತ್ತು. ಯಡಿಯೂರಪ್ಪನವರು ಸೀನಿಯರ್ ಇದ್ರು. ಹಾಗಾಗಿಯೇ ನಾನು ಅವರ ಮಂತ್ರಿ ಮಂಡಲದಲ್ಲಿ ಕೆಲಸ ಮಾಡಿದ್ದೆ. ಈಗ ನಾನು ಮಂತ್ರಿ ಮಂಡಲದಲ್ಲಿ ಸೇರುವುದಿಲ್ಲವೆಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ತಮ್ಮ ಹೇಳಿಕೆಯನ್ನ ನೀಡಿರುವ ಜಗದೀಶ ಶೆಟ್ಟರ ಅವರು, ತಾವು ಸಂಪುಟದಲ್ಲಿ ಸೇರದಿರಲು ನಿರ್ಧರಿಸಿದ್ದು, ಈ ಬಗ್ಗೆ ಯಡಿಯೂರಪ್ಪ ಹಾಗೂ ನಳೀನಕುಮಾರ ಕಟೀಲರಿಗೆ ತಿಳಿಸಿದ್ದೇನೆ ಎಂದರು.
ಈ ಹಿಂದೆ ಮಂತ್ರಿಯಾಗುವಾಗಲೂ ಜಗದೀಶ ಶೆಟ್ಟರ ಅವರು ಮಂತ್ರಿಯಾಗದೇ ಇರುವುದು ಒಳಿತು ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೂ, ಕೈಗಾರಿಕಾ ಮಂತ್ರಿಗಳಾಗಿ ಕಾರ್ಯನಿರ್ವಹಿಸಿದ್ದರು.
1994ರಲ್ಲಿ ಜಗದೀಶ ಶೆಟ್ಟರ ವಿರುದ್ಧ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 20 ಸಾವಿರ ಮತಗಳ ಅಂತರದಿಂದ ಸೋತಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.