Posts Slider

Karnataka Voice

Latest Kannada News

ಇಸ್ಮಾಯಿಲ್ ತಮಾಟಗಾರ “ಹತ್ಯೆ ಸಂಚಿನ” ಸ್ಪೋಟಕ ಮಾಹಿತಿ….!!!!

1 min read
Spread the love

ಧಾರವಾಡ: ಕಾಂಗ್ರೆಸ್ ಮುಖಂಡ ಹಾಗೂ ಧಾರವಾಡ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಾಟಗಾರ ಹತ್ಯೆ ಸಂಚಿನ ಮತ್ತೋರ್ವ ಆರೋಪಿಯನ್ನ ಹೆಡಮುರಿಗೆ ಕಟ್ಟುವಲ್ಲಿ ಯಶಸ್ವಿಯಾಗಿದ್ದು, ಮೊದಲು ಬಂಧಿತರಿಂದ ಹರಿತವಾದ ಚಾಕುವೊಂದನ್ನ ವಶಕ್ಕೆ ಪಡೆಯಲಾಗಿದೆ.

ಇಸ್ಮಾಯಿಲ್ ತಮಾಟಗಾರ ಹತ್ಯೆ ಸಂಚು ನಡೆದಿದೆ ಎಂಬ ದೂರನ್ನ ಪಡೆದಿದ್ದ ಪೊಲೀಸರು, ತಕ್ಷಣವೇ ಕಾರ್ಯಪ್ರವೃತ್ತರಾಗಿದ್ದರು. ಅಷ್ಟೇ ಅಲ್ಲ, ದಕ್ಷ ಅಧಿಕಾರಿಯಾಗಿರುವ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಪ್ರಕರಣದ ಬಗ್ಗೆ ಗಂಭೀರವಾಗಿ ತನಿಖೆಗೆ ಮುಂದಾಗಿದ್ದರು.

ಮೊದಲು ಬಂಧಿತರಾಗಿದ್ದವರಿಂದ ಚಾಕುವೊಂದನ್ನ ವಶಕ್ಕೆ ಪಡೆಯಲಾಗಿದೆ. ಬೇರೆ ರಾಜ್ಯದಲ್ಲಿ ತಲೆಮರೆಸಿಕೊಂಡಿದ್ದ ಖಾಜು ಎಂಬ ಆರೋಪಿಯನ್ನ ಬಂಧಿಸಿ, ಆತನನ್ನ ಇಂದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಶಹರ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ ಅವರು ಪ್ರಕರಣದ ಇಂಚಿಂಚೂ ಮಾಹಿತಿಯನ್ನ ಕಲೆ ಹಾಕುತ್ತಿದ್ದು, ಷಢ್ಯಂತ್ರದ ಪ್ರಮುಖ ರೂವಾರಿಯನ್ನ ಶೀಘ್ರದಲ್ಲಿ ಬಂಧಿಸುವ ನಿರೀಕ್ಷೆಯಿದೆ.

ಬಂಧಿತರಿಂದ ಹಲವು ಪ್ರಮುಖ ಅಂಶಗಳನ್ನ ತನಿಖೆ ವೇಳೆಯಲ್ಲಿ ಪತ್ತೆಯಾಗಿದ್ದು, ಹತ್ಯೆ ಸಂಚಿನ ಸ್ಕೆಚ್ ರೂವಾರಿ ಖೆಡ್ಡಾದಲ್ಲಿ ಬೀಳುವುದು ನಿಶ್ಚಿತವೆನ್ನಲಾಗಿದೆ.


Spread the love

Leave a Reply

Your email address will not be published. Required fields are marked *