ಧಾರವಾಡ-71ಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಅರ್ಜಿ ಕೊಟ್ಟ “ಇಸ್ಮಾಯಿಲ ತಮಾಟಗಾರ”…

ಬೆಂಗಳೂರು: ಧಾರವಾಡ- 71 ಕ್ಷೇತ್ರದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಇಸ್ಮಾಯಿಲ ತಮಾಟಗಾರ ಅವರು ಕೆಪಿಸಿಸಿಗೆ ಅರ್ಜಿಯನ್ನ ಸಲ್ಲಿಸಿದ್ದಾರೆ.

ಕ್ಷೇತ್ರದ ಹಲವು ಮುಖಂಡರೊಂದಿಗೆ ತೆರಳಿದ್ದ ಇಸ್ಮಾಯಿಲ ತಮಾಟಗಾರ ಅವರು ಎರಡು ಲಕ್ಷ ರೂಪಾಯಿಯ ಚೆಕ್ ಸಮೇತ ಅರ್ಜಿಯನ್ನ ಸಲ್ಲಿಸುವ ಮೂಲಕ ತಾವು ಪ್ರಬಲ ಆಕಾಂಕ್ಷಿ ಎಂಬುದನ್ನ ಸಾಬೀತು ಮಾಡಿದ್ದಾರೆ.
ಧಾರವಾಡ-71 ಕ್ಷೇತ್ರದ ಪ್ರಮುಖ ನಾಯಕ ದೀಪಕ ಚಿಂಚೋರೆ ಸಮೇತ ಹಲವರು ಈ ಸಮಯದಲ್ಲಿ ಉಪಸ್ಥಿತರಿದ್ದರು.