Posts Slider

Karnataka Voice

Latest Kannada News

“ದಾ” ದುರಂತ ಅಂತ್ಯ: ಬದುಕುಳಿಯಲಿಲ್ಲ ಪ್ರೂಟ್ ಇರ್ಫಾನ್- ತನಿಖೆಗೆ ಸಿಸಿಟಿವಿನೇ ಪ್ರಮುಖ ಸಾಕ್ಷಿ

1 min read
Spread the love

ಹುಬ್ಬಳ್ಳಿ: ಮಗನ ಮದುವೆಯ ಸಂಭ್ರಮದಲ್ಲಿ ಮೈಮರೆತಾಗಲೇ ಗುಂಡು ತಗುಲಿದ್ದ ಸೈಯದ್ ಇರ್ಫಾನ್ ಅಲಿಯಾಸ್ ಫ್ರೂಟ್ ಇರ್ಫಾನ್ ಕೊನೆಗೂ ಚಿಕಿತ್ಸೆ ಫಲಿಸದೇ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ.


ಮಗನ ಮದುವೆಯನ್ನ ಮಾಡಿ ಇವತ್ತು ವಲೀಮಾ ಮುಗಿಸಿ ಬೀಗರನ್ನ ಕಳಿಸುತ್ತಿದ್ದಾಗ ಬೈಕ್‌ನಲ್ಲಿ ಬಂದ ಇಬ್ಬರು ಮತ್ತೂ ಮೊದಲೇ ಹೊಂಚಾಕಿ ಕುಳಿತಿದ್ದ ಇಬ್ಬರು ಒಂದೇ ಸಮನೆ ಗುಂಡಿನ ಸುರಿಮಳೆಗೈಯ್ದಿದ್ದರು. ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೇ ಇರ್ಫಾನ್ ಸಾವಿಗೀಡಾಗಿದ್ದಾನೆ.


ಧಾರವಾಡದ ಕೆಲವು ಕೊಲೆ ಪ್ರಕರಣಗಳಲ್ಲಿ ಕಾಣಿಸಿಕೊಂಡಿದ್ದ ಇರ್ಫಾನನ್ನ ಪೊಲೀಸ್ ಆಯುಕ್ತರಾಗಿ ಆರ್.ದಿಲೀಪ ಬಂದ ನಂತರ ಗಡಿಪಾರು ಮಾಡಿದ್ದರು.
ಮೂಲತಃ ಉತ್ತರಕನ್ನಡ ಜಿಲ್ಲೆಯ ಇರ್ಫಾನ್ ಹೊಟ್ಟೆಪಾಡಿಗಾಗಿ ಧಾರವಾಡಕ್ಕೆ ಬಂದು ಡಾನ್ ಆಗಿದ್ದು, ಪರಿಸ್ಥಿತಿಯ ವ್ಯಂಗ್ಯವೇ ಸರಿ.


ಕೊಲೆಗೆ ನಿಖರವಾದ ಕಾರಣಕ್ಕಾಗಿ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ತನಿಖೆಯನ್ನ ಕೈಗೊಂಡಿದ್ದಾರೆ. ಈಗಾಗಲೇ ವೈರಲ್ ಆಗಿರುವ ಸಿಸಿಟಿವಿ ದೃಶ್ಯಗಳನ್ನು ಕಲೆ ಹಾಕಿ, ಓಡಿ ಹೋಗಿರುವವರ ಮತ್ತೂ ಬಳಕೆಯಾಗಿರುವ ದ್ವಿಚಕ್ರ ವಾಹನಗಳ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.


ಪ್ರೂಟ್ ಇರ್ಫಾನ್ ಎಂಬ ಸಾಮಾನ್ಯ ಯುವಕ ಪರಿಸ್ಥಿತಿಗೆ ಡಾನ್ ಆಗಿದ್ದು ನಂತರ “ದಾ” ಆಗಲು ಹೋಗಿದ್ದು.. ಒಟ್ಟಾರೆ… ಪ್ರೂಟ್ ಇರ್ಫಾನ್ ಕರಾಳ ಅಂತ್ಯ ಕಂಡ… ಅಷ್ಟೇ…!


Spread the love

Leave a Reply

Your email address will not be published. Required fields are marked *