“ಈರಣ್ಣ ಮಲ್ಲಿಗವಾಡ” ಹೃದಯಾಘಾತದಿಂದ ಸಾವು…

ಧಾರವಾಡ: ನಗರದ ವಾಲ್ಮೀಕಿ ಸಮಾಜದ ಮುಖಂಡ ಈರಣ್ಣ ಮಲ್ಲಿಗವಾಡ ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ.

ಧಾರವಾಡ ನಗರದಲ್ಲಿನ ಮನೆಯಲ್ಲಿ ಹೃದಯಾಘಾತವಾದ ನಂತರ ಅವರನ್ನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ.
ನಗರದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿದ್ದ ಈರಣ್ಣ ಮಲ್ಲಿಗವಾಡ ಹಲವು ಜನಪರ ಕಾರ್ಯಗಳನ್ನು ಮಾಡಿದ್ದರು. ಅವರ ಸಾವು, ನಗರದ ನೂರಾರೂ ಜನರಲ್ಲಿ ಅಚ್ಚರಿ ಮೂಡಿಸಿದೆ.
ಧಾರವಾಡ ವಾಲ್ಮೀಕಿ ಸಮಾಜದ ಮುಖಂಡ ಈರಣ್ಣ ಮಲ್ಲಿಗವಾಡ ಇನ್ನಿಲ್ಲ
ಧಾರವಾಡ : ವಾಲ್ಮೀಕಿ ಸಮಾಜದ ಮುಖಂಡರಾದ ಈರಣ್ಣ ಮಲ್ಲಿಗವಾಡ ಅವರು ಇಂದು ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು.
ಅವರಿಗೆ ಸಂಜೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಎಸ್ ಡಿ ಎಂ ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದರು
ಅವರಿಗೆ 62 ವರ್ಷ ವಯಸ್ಸಾಗಿತ್ತು.
ಅವರ ಅಂತಿಮ ಕ್ರಿಯೆ ಧಾರವಾಡದ
ಹೊಸಯಲ್ಲಾಪುರ ರುದ್ರಭೂಮಿ ಯಲ್ಲಿ
ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.
ಗಾಂಧಿನಗರ ನಿವಾಸದಿಂದ ಅಂತಿಮಯಾತ್ರೆ ಹೊರಡಲಿದೆ.
ಅವರು ಪತ್ನಿ ಹಾಗೂ ಮಕ್ಕಳು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಅವರ ನಿಧನಕ್ಕೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.