Posts Slider

Karnataka Voice

Latest Kannada News

ಠಾಣೆಯಲ್ಲಿ “ವಿಚಾರಣಾಧೀನ ಸಾವು”- ಪಿಐ,ಪಿಎಸ್ಐ ಸೇರಿ ಐವರ ಸಸ್ಪೆಂಡ್…

1 min read
Spread the love

ಕಳ್ಳತನ ಪ್ರಕರಣದ ಆರೋಪಿ ಸಾವು 

ಠಾಣೆಯಲ್ಲಿದ್ದಾಗಲೇ ವಿಷ ಸೇವಿಸಿದ್ದನೆಂಬ ವದಂತಿ

ಹೊನ್ನಾವರ: ಪೊಲೀಸ್ ಠಾಣೆಗೆ ವಿಚಾರಣೆಗೆಂದು ಠಾಣೆಗೆ ಕರೆತಂದಿದ್ದ ವೇಳೆ ವ್ಯಕ್ತಿಯೋರ್ವ ವಿಷ ಸೇವನೆ ಮಾಡಿ ಸಾವನ್ನಪ್ಪಿರುವ ಪ್ರಕರಣದಲ್ಲಿ ಪಿಎಸ್ಐ ಸೇರಿ ಐವರನ್ನ ಅಮಾನತು ಮಾಡಲಾಗಿದೆ.


ಬಿಹಾರ ಮೂಲದ ದಿಲೀಪ್ ಮಂಡಲ್ (37) ಎಂಬಾತನೆ ಸಾವನ್ನಪ್ಪಿದ ವ್ಯಕ್ತಿ. ಈತ ಬಂಗಾರ ತೊಳೆದುಕೊಡುವ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದ್ದು, ಹೊನ್ನಾವರ ಪಟ್ಟಣದ ತುಳಸಿನಗರದಲ್ಲಿ ಬಂಗಾರ ಸ್ವಚ್ಛಗೊಳಿಸಿಕೊಡುತ್ತಿದ್ದ, ಈತನ ವಿರುದ್ದ ಕಳ್ಳತನ ಆರೋಪದ ಇತ್ತು ಎನ್ನಲಾಗಿದ್ದು, ಆ ಕಾರಣಕ್ಕಾಗಿ ವಿಚಾರಣೆಗಾಗಿ ಠಾಣೆಗೆ ಕರೆತರಲಾಗಿತ್ತು ಎನ್ನಲಾಗಿದೆ. ಈ ವೇಳೆ ಠಾಣೆಯಲ್ಲಿ ಕೂರಿಸಿದಾಗ ನೀರು ಕುಡಿಯುವುದಾಗಿ ಹೇಳಿ ಬ್ಯಾಗಿನಲ್ಲಿದ್ದ ಬಂಗಾರ ತೊಳೆಯುವ ರಾಸಾಯನಿಕ ಸೇವಿಸುತ್ತಿದ್ದು , ಇದರಿಂದಾಗಿ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.


ಪ್ರಕರಣದಲ್ಲಿ ಠಾಣೆಯ ಪಿಐ ಮಂಜುನಾಥ್, ಠಾಣೆಯ ಕ್ರೈಂ ಪಿ.ಎಸ್.ಐ ಮಂಜೇಶ್ವರ್ ಚಂದಾವರ, ಪೊಲೀಸ್ ಸಿಬ್ಬಂದಿಗಳಾ ಮಹಾವೀರ, ರಮೇಶ್, ಸಂತೋಷ್ ಅಮಾನತ್ ಆಗಿದ್ದಾರೆ.


Spread the love

Leave a Reply

Your email address will not be published. Required fields are marked *