Posts Slider

Karnataka Voice

Latest Kannada News

ಹುಬ್ಬಳ್ಳಿ ವಿದ್ಯಾನಗರ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಹೊಳಿ “ಸಿಸಿಬಿ” ಗೆ…

Spread the love

ಹುಬ್ಬಳ್ಳಿ: ಪ್ರತಿಷ್ಠಿತ ಕಿಮ್ಸ್ ವಸತಿ ಗೃಹದ ಬಳಿ ನಡೆದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿದ್ಯಾನಗರ ಠಾಣೆ ಇನ್ಸಪೆಕ್ಟರ್ ಮಹಾಂತೇಶ ಹೊಳಿ ಅವರನ್ನ ಸಿಸಿಬಿಗೆ ವರ್ಗಾಯಿಸಿ, ಪರಿಸ್ಥಿತಿಯನ್ನ ಪೊಲೀಸ್ ಕಮೀಷನರ್ ಹತೋಟಿಗೆ ತರಲು ಮುಂದಾಗಿದ್ದಾರೆ.

ಕಿಮ್ಸನ ವಸತಿ ಗೃಹಗಳಲ್ಲಿ ನಡೆದ ಕಳ್ಳತನ ಪ್ರಕರಣದ ಬಗ್ಗೆ ಮಲ್ಲಿಕಾರ್ಜುನ ಸತ್ತಿಗೇರಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಿ ಕಳೆದ ಎರಡು ದಿನಗಳಿಂದ ಹಿಂದೂಪರ ಮುಖಂಡರು ನಿರಂತರ ಹೋರಾಟ ನಡೆಸಿದ್ದಲ್ಲದೇ, ಇನ್ಸಪೆಕ್ಟರ್ ಸೇರಿದಂತೆ ಹಲವರ ಮೇಲೆ ಎಫ್‌ಐಆರ್ ದಾಖಲು ಮಾಡುವಂತೆ ಆಗ್ರಹಿದ್ದರು.

ಈ ಬಗ್ಗೆ ಹಿಂದೂ ನಾಯಕ ಜಯತೀರ್ಥ ಕಟ್ಟಿ ಸಮಗ್ರವಾಗಿ ವಿವರಿಸಿದ್ದರು.

ಕಳೆದ ಎರಡು ದಿನಗಳ ಸಂಧಾನ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಕಮೀಷನರ್ ಲಾಬುರಾಮ್ ಅವರು, ಇನ್ಸಪೆಕ್ಟರ್ ಮಹಾಂತೇಶ ಹೊಳಿ ಹಾಗೂ ಕೃಷ್ಣಾ ಮೊಟೆಬೆನ್ನೂರ ಅವರುಗಳನ್ನ ವರ್ಗಾವಣೆ ಮಾಡಿದ್ದಾರೆ.


Spread the love

Leave a Reply

Your email address will not be published. Required fields are marked *