ಇನ್ಸಪೆಕ್ಟರ್ ಪ್ರಭು ಸೂರಿನ್ ವಿರುದ್ಧ ಕ್ರಮ ಜರುಗಿಸದೇ ಇದ್ದರೇ, ಮತ್ತೆ ಹೋರಾಟ…!
1 min readಧಾರವಾಡ: ಮಾಹಿತಿ ನೀಡಿದವರನ್ನ ಬಂದನ ಮಾಡಿ ಕಿರುಕುಳ ನೀಡಿದ್ದಲ್ಲದೇ ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂದು ದೂರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಳೆಯೊಳಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮವನ್ನ ಜರುಗಿಸದೇ ಇದ್ದಲ್ಲಿ, ಹೋರಾಟದ ರೂಪುರೇಷೆ ರಚನೆ ಮಾಡಲು ಸಿದ್ಧವಾಗಿದ್ದಾರೆ.
ಜನೇವರಿ 9ರಂದು ಹಸರಂಬಿ ಅರಣ್ಯ ಪ್ರದೇಶದಲ್ಲಿ ನಾಡ ಬಂದೂಕು ಪ್ರಕರಣದಲ್ಲಿ ಇಬ್ಬರನ್ನ ಬಂಧನ ಮಾಡಲಾಗಿತ್ತು. ಈ ವಿಷಯವನ್ನ ಮಾಹಿತಿ ನೀಡಿದ ವ್ಯಕ್ತಿಯನ್ನ 3ನೇ ಆರೋಪಿ ಎಂದು ವಿನಾಕಾರಣ ಕೇಸಿನಲ್ಲಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು.
3ನೇ ಆರೋಪಿಯನ್ನಾಗಿ ಡೇವಿಡ್ ಚೆನ್ನಪ್ಪಾ ದೂಫದ ಎಂಬುವವರನ್ನ ಇನ್ಸಪೆಕ್ಟರ್ ಪ್ರಭು ಸೂರಿನ್, ಫ್ಯಾನಿಗೆ ತೂಗು ಹಾಕಿ, ಕೈಗಳನ್ನ ಹಿಂದೆ ಕಟ್ಟಿ ಹಿಗ್ಗಾ-ಮುಗ್ಗಾ ಹೊಡೆದಿದ್ದಾರೆಂದು ದೂರು ನೀಡಿ, ಇನ್ಸಪೆಕ್ಟರ್ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದರು.
ನಾಳೆ ಸಂಜೆಯೊಳಗೆ ಇನ್ಸಪೆಕ್ಟರ್ ಪ್ರಭು ಸೂರಿನ್ ಮೇಲೆ ಕ್ರಮ ಜರುಗಿಸದೇ ಇದ್ದರೇ, ಮತ್ತೆ ಹೋರಾಟದ ಹಾದಿಯನ್ನ ಹಿಡಿಯುವುದಾಗಿ ಸಮಿತಿಯು ಹೇಳಿಕೊಂಡಿದೆ.