ಇಂಗಳಹಳ್ಳಿಯಲ್ಲಿ ವಿಕಾಸಕ್ಕಾಗಿ ಓಡಿದ ವಾಲಿ ಗುರೂಜಿ…!

ವಿಕಾಸಕ್ಕಾಗಿ ಓಟ!
ಹುಬ್ಬಳ್ಳಿ ತಾಲೂಕಿನ ಇಂಗಳಹಳ್ಳಿ ಗ್ರಾಮದಲ್ಲಿ ಸ್ನೇಹಿತ, ಯುವ ನಾಯಕ ದುಂಡಪ್ಪ ಶೆಟ್ಟರ್ ಪ್ರಾಯೋಜಕತ್ವದಲ್ಲಿ ನಡೆದ ಮ್ಯಾರಥಾನ್ ಗೆ ಚಾಲನೆ ನೀಡಲಾಯಿತು.

ಆರೋಗ್ಯವಂತ, ಸಧೃಡ ಯುವ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಒಂದು ಪುಟ್ಟ ಹೆಜ್ಜೆ ಇಟ್ಟು ಹಳ್ಳಿಯಲ್ಲಿ ಇಂಥ ಕಾರ್ಯ ಆಯೋಜನೆ ಮಾಡಿದ್ದು ನಿಜಕ್ಕೂ ಮಾದರಿ. ನೂರಾರು ಸಂಖ್ಯೆಯಲ್ಲಿ ತರುಣರು ಭಾಗವಹಿಸಿ ವಿಕಾಸಕ್ಕಾಗಿ ಓಡಿದರು.

ಪೂಜ್ಯ ಸಮರ್ಥ ಸದ್ಗುರು ಡಾ.ವಾಲಿ ಗುರೂಜಿ ಸಾನಿಧ್ಯ ವಹಿಸಿದ್ದರು. ಬಸವರಾಜ್ ಕುಂದಗೋಳಮಠ, ಚೈತ್ರ ಶಿರೂರು, ರಾಜಶೇಖರ ಕಂಪ್ಲಿ, ವೀರೇಶ್ ಸಂಗಳದ,
ಶಶಿ ತೆಂಗಿನಕಾಯಿ, ಮಂಜು ಗಡಿಯನ್ನವರ, ಹನಮಂತ ಹುಚ್ಚನ್ನವರ, ರಾಜು ಹುಲ್ಲಂಬಿ, ಗುರುಪಾದ ಮೆಣಸಿನಕಾಯಿ, ಮಲ್ಲಪ್ಪ ಹಳಕಟ್ಟಿ, ದುಂದುರ್, ರವಿಚಂದ್ರ ಹುಬ್ಬಳ್ಳಿ ಸೇರಿದಂತೆ ಯುವ ಮುಖಂಡರುಗಳು ಉಪಸ್ಥಿತರಿದ್ದರು.