Posts Slider

Karnataka Voice

Latest Kannada News

ಐಸಿಯುನಲ್ಲಿ ಬಸವರಾಜ ಕೊರವರ: ಕಣ್ಣೀರು ಹಾಕುತ್ತಿರುವ ಮಹಿಳೆಯರು…

Spread the love

ಧಾರವಾಡ: ನೂರಾರು ಕುಟುಂಬಗಳ ಜೀವನ ಬೀದಿಯಲ್ಲಿರಬಾರದೆಂಬ ಉದ್ದೇಶದಿಂದ ಸಾಮಾಜಿಕ ಕಾರ್ಯಕರ್ತ ಬಸವರಾಜ ಕೊರವರ ಅವರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗಲೇ ತೀವ್ರ ಅಸ್ವಸ್ಥಗೊಂಡ ಪರಿಣಾಮ ಧಾರವಾಡದ ಸಿವಿಲ್ ಆಸ್ಪತ್ರೆಯ ಐಸಿಯುಗೆ ಶಿಫ್ಟ್ ಮಾಡಲಾಗಿದೆ.

ತಮಗಾಗಿ ಹೋರಾಟ ನಡೆಸಿ ಆರೋಗ್ಯದಲ್ಲಿ ಏರುಪೇರಾಗಿದ್ದನ್ನ ನೋಡಿದ ಹೋರಾಟ ನಿರತ ಮಹಿಳೆಯೊಬ್ವರು, ಐಸಿಯುನಲ್ಲಿ ಬಸವರಾಜ ಕೊರವರ ಅವರನ್ನ ನೋಡಿ ಕಣ್ಣೀರಾದರು. “ನಮಗ್ ಏನೂ ಬ್ಯಾಡೋ ತಮ್ಮಾ.. ನೀ ಅರಾಮ್ ಆಗು… ಕೈ ಮುಗಿತೇನಿ ನೀರ್ ಕುಡಿಯೋ..” ಎಂದು ಅಂಗಲಾಚುತ್ತಿರುವುದು ಕಂಡು ಬಂದಿತು.

ಈ ಸಮಯದಲ್ಲಿ ನೌಕರಿ ವಂಚಿತ ಕುಟುಂಬದವರಿಗೆ ಧೈರ್ಯ ಹೇಳಿದ ಬಸವರಾಜ ಕೊರವರ, ನಿಮ್ಮ ಮನೆಗೆ ಒಳ್ಳೆಯದಾದರೇ ಅಷ್ಟೇ ಸಾಕು. ಹೋರಾಟದ ಮೂಲಕ ನಾನು ಸತ್ತರೂ, ನಿಮಗೆ ನ್ಯಾಯ ಸಿಗಲಿ’ ಎಂದರು.

ಬಸವರಾಜ ಕೊರವರ ಅವರು ನೀರನ್ನೂ ಕುಡಿಯದೇ ಇರುವುದರಿಂದ ಆರೋಗ್ಯದಲ್ಲಿ ತೀವ್ರ ಏರುಪೇರಾಗಿದೆ.


Spread the love

Leave a Reply

Your email address will not be published. Required fields are marked *