Posts Slider

Karnataka Voice

Latest Kannada News

“ಐಎಎಸ್ ಲತಾಕುಮಾರಿ” ವರ್ಗಾವಣೆ ಮಾಡದಂತೆ ರಾಜ್ಯ ವಿಕಲಚೇತನರಿಂದ ಆಗ್ರಹ…

1 min read
Spread the love

ಧಾರವಾಡ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕಿಯಾಗಿರುವ ಲತಾಕುಮಾರಿ ಅವರನ್ನ ಹಾಲಿ ಸ್ಥಳದಿಂದ ವರ್ಗಾವಣೆ ಮಾಡಬಾರದೆಂದು ಕರ್ನಾಟಕ ರಾಜ್ಯ ವಿಕಲಚೇತನರ ಹಾಗೂ ವಿವಿದ್ದೋದ್ದೇಶ ಒಕ್ಕೂಟ ಜಿಲ್ಲಾಧಿಕಾರಿಗಳ ಮೂಲಕ ಧಾರವಾಡದಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಎಂಆರ್‌ಡಬ್ಲ್ಯೂ, ವ್ಹಿಆರ್‌ಡಬ್ಲ್ಯೂ ಹಾಗೂ ಯುಆರ್‌ಡಬ್ಲ್ಯೂ ಕಾರ್ಯಕರ್ತರು ಕೂಡಿಕೊಂಡು ಮನವಿ ನೀಡಿದ್ದಲ್ಲದೇ, ಹಾಲಿ ನಿರ್ದೇಶಕಿಯರನ್ನ ಅದೇ ಸ್ಥಳದಲ್ಲಿ ಮುಂದುವರೆಸುವಂತೆ ಕೇಳಿಕೊಂಡರು.

ಇಲಾಖೆಯ ನಿರ್ದೇಶಕಿಯರಾದ ಲತಾಕುಮಾರಿ ಅವರು, ಹಲವು ಉತ್ತಮ ಕಾರ್ಯಗಳನ್ನ ಜಾರಿ ಮಾಡಿ ಎಲ್ಲರಿಗೂ ಅನುಕೂಲವಾಗುವ ರೀತಿಯಲ್ಲಿ ನಡೆದುಕೊಂಡಿದ್ದಾರೆ. ಅವರನ್ನ ಯಾವುದೇ ಕಾರಣಕ್ಕೂ ಬದಲಾವಣೆ ಮಾಡಬೇಡಿ ಎಂದಿದ್ದಾರೆ.

ರಾಜ್ಯ ನಿರ್ದೇಶಕ ರವೀಂದ್ರ ಹುಬ್ಬಳ್ಳಿ, ಧಾರವಾಡ ಜಿಲ್ಲಾ ಅಧ್ಯಕ್ಷ ಬಸಪ್ಪ ಬೆಳಾರದ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *