ಹುಬ್ಬಳ್ಳಿಯ ಉಪನಗರ ಠಾಣೆಗೆ ಬಿಡುಗಡೆಯಲ್ಲದ ಬೇಡಿ…!

ಹುಬ್ಬಳ್ಳಿ: ಕೊರೋನಾ ಪ್ರಕರಣದಿಂದ ಹಲವು ರೀತಿಯ ದೃಶ್ಯಗಳನ್ನ ನೋಡುವುದಕ್ಕೆ ಅಲ್ಲಲ್ಲಿ ಕಾಣಸಿಗುತ್ತಿದ್ದು, ಸೋಜಿಗ ಪಡುವಂತವೂ ಅಚ್ಚರಿ ಮೂಡಿಸುತ್ತಿವೆ.

ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಕೊರೋನಾ ಹೆಚ್ಚುತ್ತಿರುವ ಕಾರಣದಿಂದ ಬಂದೋಬಸ್ತ್ ನಿಯೋಜನೆಯಲ್ಲಿ ತೊಡಗಿದ್ದಾರೆ. ಈ ಸಮಯದಲ್ಲಿ ಹಲವು ವಾಹನಗಳನ್ನ ನಿಯಮ ಉಲ್ಲಂಘನೆ ಮಾಡಿದ್ದರಿಂದ ವಶಕ್ಕೆ ಪಡೆಯಲಾಗಿದೆ.
ಹಲವು ವಾಹನಗಳನ್ನ ವಶಕ್ಕೆ ಪಡೆದ ವಾಹನಗಳನ್ನ ಯಾರೂ ತೆಗೆದುಕೊಂಡು ಹೋಗಬಾರದೆಂದು ಸರಪಳಿಯನ್ನ ಹಾಕಿದ್ದು, ಅವುಗಳಿಗೆ ಖೈದಿಗಳಿಗೆ ಬಳಕೆ ಮಾಡುವ ಬೇಡಿಗಳನ್ನ ಹಾಕಲಾಗಿದೆ.
ಕೊರೋನಾ ಸಮಯದಲ್ಲಿ ಕಳ್ಳತನ-ಸುಲಿಗೆಯಂತಹ ಪ್ರಕರಣಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಬೇಡಿಗಳು ಇಂತಹ ಕೆಲಸಗಳಿಗೆ ಸಹಾಯವಾಗುತ್ತಿರಬಹುದಲ್ಲವೇ..!