Posts Slider

Karnataka Voice

Latest Kannada News

ಹುಬ್ಬಳ್ಳಿ “ಲೇಡಿ PSI” ಹಾರಿಸಿದ “2ಗುಂಡು” ಮತ್ತೂ ಆರೋಪಿಯ “ರಿಕ್ಕಿ”- ರಹಸ್ಯ ಬಿಚ್ಚಿಟ್ಟ ಪೊಲೀಸ್ ಕಮೀಷನರ್…

1 min read
Spread the love

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಜ್ಯುವೇಲರಿ ಲೂಟಿ ಮಾಡುವ ಮುನ್ನ ನಟೋರಿಯಸ್ ಕೊಲೆಪಾತಕ ಮತ್ತೂ ಕಳ್ಳನೋರ್ವ ಯಾವ ರೀತಿಯ ಪ್ಲಾನ್ ಮಾಡಿದ್ದ. ಎರಡು ಸಾವಿರ ರೂಪಾಯಿ ಕೊಟ್ಟು ಹೇಗೆ ಮಾಹಿತಿ ಸಂಗ್ರಹಿಸಿದ್ದ ಎಂಬುದನ್ನ ಪೊಲೀಸ್ ಕಮೀಷನರ್ ಎಸ್.ಶಶಿಕುಮಾರ್ ಅವರು ಬಹಿರಂಗ ಮಾಡಿದ್ದಾರೆ.

ಮುಂಬೈ ಮೂಲದ ಫರ್ಹಾನ ಶೇಖ್ ನಟೋರಿಯಸ್, ಕಳ್ಳತನ ಮಾಡುವ ಎರಡು ದಿನ ಮೊದಲು ಹುಬ್ಬಳ್ಳಿಯಲ್ಲಿ  “ರಿಕ್ಕಿ” ಮಾಡಿದ್ದ. (ಪೊಲೀಸ್ ಭಾಷೆಯಲ್ಲಿ ಹುಡುಕಾಟ ಮಾಡುವುದು) ಅದೇ ಕಾರಣಕ್ಕೆ ಎರಡು ಸಾವಿರ ರೂಪಾಯಿ ಖರ್ಚು ಮಾಡಿದ್ದ. ಈ ವಿಷಯವನ್ನ ಕಮೀಷನರ್ ಹೇಳಿದ್ದಾರೆ.

ಕಳ್ಳ ಸಿಕ್ಕಿದ್ದು, ಆತ ಕದ್ದಿರುವ ಚಿನ್ನಾಭರಣ ಎಲ್ಲಿ ಮಾರಾಟ ಮಾಡಿದ್ದಾನೆ ಎಂಬುದನ್ನೂ ಹೇಳಿದ್ದಾನೆ ಎಂದಿರುವ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು, ಕದ್ದಿರುವ ಚಿನ್ನ, ಬೆಳ್ಳಿಯನ್ನ ವಶಕ್ಕೆ ಪಡೆಯಬೇಕಿದೆ.


Spread the love

Leave a Reply

Your email address will not be published. Required fields are marked *