“ನಮ್ಮನ್ನೂ ಬಂಧಿಸಿ” ಎಂದವರನ್ನ “ಬಂಧಿಸಿದ” ಹುಬ್ಬಳ್ಳಿ ಪೊಲೀಸರು…

ಹುಬ್ಬಳ್ಳಿ: ಕರ ಸೇವಕ ಪೂಜಾರಿ ಬಂದನ ಹಿನ್ನೆಲೆ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿರೋ ಹಿನ್ನೆಲೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ನನ್ನನ್ನು ಬಂಧಿಸಿ ಎಂಬ ಭಿತ್ತಿ ಚಿತ್ರವನ್ನು ಹಿಡಿದುಕೊಂಡು ಪ್ರತಿಭಟನೆ ಮುಂದುವರೆಸಿದ್ದಾರೆ.
ಹಿಂದು ಮುಖಂಡ ಜಯತೀರ್ಥ ಕಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ, ಮಾಜಿ ಶಾಸಕ ಅಶೋಕ ಕಾಟವೆ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಶಹರ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಕುಳಿತು ಇದೀಗ ನಮ್ಮನ್ನು ಕೂಡಾ ಬಂಧನ ಮಾಡುವಂತೆ ಪ್ರತಿಭಟಿಸಿದರು.
ಪ್ರತಿಭಟನೆ ವೀಡಿಯೋ…
ಈ ನಡುವೆ ಬಂಧನವಾಗಿರುವ ಕರ ಸೇವಕ ಶ್ರೀಕಾಂತ್ ಪೂಜಾರಿಗೆ ಕೋರ್ಟ್ ಷರತ್ತು ಬದ್ದ ಜಾಮೀನನ್ನು ಕೂಡಾ ನೀಡಿದೆ.ಆದ್ರೆ ಇಂದು ಏಕಾಏಕಿ ಬಿಜೆಪಿ ಕಾರ್ಯಕರ್ತರು ನಮ್ಮನ್ನು ಕೂಡಾ ಬಂದನ ಮಾಡುವಂತೆ ಪೊಲೀಸ ಠಾಣೆಯ ಮುಂದೆಯೇ ನಾವು ರಾಮ ಭಕ್ತರು ನಮ್ಮನ್ನು ಕೂಡಾ ಬಂದನ ಮಾಡುವಂತೆ ಇದೀಗ ಪ್ರತಿಭಟನೆಗೆ ಮುಂದಾಗಿದ್ದು, ಅವರನ್ನ ಪೊಲೀಸರು ಬಂಧಿಸಿ, ಕರೆದೊಯ್ದರು.