Posts Slider

Karnataka Voice

Latest Kannada News

ವೃದ್ಧಾಶ್ರಮ ಆಸ್ತಿಗಾಗಿ ಹುಬ್ಬಳ್ಳಿಯಲ್ಲಿ ಕೊಲೆ ಯತ್ನ…!

1 min read
Spread the love

ಹುಬ್ಬಳ್ಳಿ: ಅಕ್ರಮವಾಗಿ ವೃದ್ಧಾಶ್ರಮ ಆಸ್ತಿ ಹೊಡೆಯಲು ಮುಂದಾಗಿದ್ದನ್ನು ಪ್ರಶ್ನಿಸಿದ ವ್ಯಕ್ತಿಯ ಕೊಲೆಗೆ ಸುಫಾರಿ ನೀಡಿರುವ ಪ್ರಕರಣ ವಾಣಿಜ್ಯನಗರದಲ್ಲಿ ಬೆಳಕಿಗೆ ಬಂದಿದೆ.

ಕೇಶ್ವಾಪುರದ ಚರ್ಚ್ ಗೆ ಸಂಬಂಧಿಸಿದ ವೃದ್ದಾಶ್ರಮದ ಜಾಗೆಯನ್ನು ಹೊಡೆಯಲು ರಾಜು ಜೋಸೇಪ್ ಎಂಬಾತ ಮುಂದಾಗಿದ್ದ‌. ಈತನ ಅಕ್ರಮದ ವಿರುದ್ದ ಸ್ಟೀಫನ್ ಎಂಬಾತ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾನೆ.‌ ಇದರಿಂದ ರೊಚ್ಚಿಗೆದ್ದ ರಾಜು ಜೋಸೇಫ್,  ಮಹೇಶ ಹಾಗೂ ಇನ್ನೊಬ್ಬನಿಗೆ ಸ್ಟೀಫನ್ ಕೊಲೆಗೆ ಸುಫಾರಿ ನೀಡಿದ್ದಾನೆ ಎಂದು ಸ್ಟೀಫನ್ ಸಂಬಂಧಿಗಳು ಆರೋಪಿಸಿದ್ದಾನೆ.

ಇದೇ ಕಾರಣದಿಂದ ಕೇಶ್ವಾಪುರದ ಸ್ಟೀಫನ್ ಅವರ ವಾಚ್ ಅಂಗಡಿಗೆ ನುಗ್ಗಿದ ಮಹೇಶ ಹಾಗೂ ಇನ್ನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಎಚ್ಚೆತ್ತುಕೊಂಡ ಸ್ಟೀಫನ್ ಎಚ್ಚೆತ್ತುಕೊಂಡು ಅಂಗಡಿಯಿಂದ ತಪ್ಪಿಸಿಕೊಂಡು ಹೋಗಿದ್ದಾನೆ. ಇವೆಲ್ಲ ದೃಶ್ಯಗಳು ಸ್ಟೀಫನ್ ಅವರ ಅಂಗಡಿಯಲ್ಲಿನ‌ ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆಯಾಗಿದ್ದು, ಕ್ಯಾರಿಬ್ಯಾಗ್ ನಲ್ಲಿ ಮಾರಕಾಸ್ತ್ರ ತೆಗೆದುಕೊಂಡು ಬಂದು ಕೊಲೆಗೆ ಯತ್ನಿಸಿಲಾಗಿದೆ ಎಂದು ಸ್ಟೀಫನ್ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಹಾಡುಹಗಲೇ ಕೊಲೆಗೆ ಯತ್ನಿಸುವ ಮನಸ್ಥಿತಿಗಳು ಇನ್ನೂ ಕಡಿಮೆಯಾಗದೇ ಇರುವುದು ಪ್ರಜ್ಞಾವಂತ ನಾಗರಿಕರಲ್ಲಿ ಆತಂಕ ಮೂಡಿಸಿದೆ.


Spread the love

Leave a Reply

Your email address will not be published. Required fields are marked *