Posts Slider

Karnataka Voice

Latest Kannada News

ಆತ್ಮಹತ್ಯೆಗಾಗಿ “ತನ್ನ ಕುತ್ತಿಗೆಗೆ ಚಾಕು” ಹಾಕಿಕೊಂಡ ಭೂಪ- ಕಿಮ್ಸನಲ್ಲಿ ಸಾವು ಬದುಕಿನ ನಡುವೆ ಹೋರಾಟ….!

Spread the love

ಹುಬ್ಬಳ್ಳಿ: ಜೀವನದಲ್ಲಿ ಮಾನಸಿಕವಾಗಿ ನೊಂದ ಯುವಕನೋರ್ವ ಆತ್ಮಹತ್ಯೆ ಮಾಡಿಕೊಳ್ಳಲು ತನ್ನದೇ ಕುತ್ತಿಗೆಗೆ ಚಾಕು ಹಾಕಿಕೊಂಡು ಗಂಭೀರ ಸ್ಥಿತಿಗೆ ಹೋದ ಘಟನೆ ನಡೆದಿದ್ದು, ಕಿಮ್ಸನಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ.

ಹಾನಗಲ್ ಪಟ್ಟಣದ ಸಲೀಂ ಎಂಬ ಯುವಕನೇ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದು, ಕಿಮ್ಸನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಸ್ಥಿತಿ ಗಂಭೀರವಾಗಿದೆ.

ಕೌಟುಂಬಿಕ ವಿಷಯಗಳಿಗೆ ಬೇಸತ್ತು, ಮನೆಯಲ್ಲಿ ಎಲ್ಲರೂ ಇದ್ದಾಗಲೇ ಚಾಕು ಹಾಕಿಕೊಂಡಿದ್ದಾನೆ. ಇದರಿಂದ ತೀವ್ರವಾದ ರಕ್ತ ಸ್ರಾವವಾಗಿದ್ದು, ತಕ್ಷಣವೇ ಆತನನ್ನ ಹುಬ್ಬಳ್ಳಿಯ ಕಿಮ್ಸಗೆ ದಾಖಲು ಮಾಡಿ, ಜೀವ ಉಳಿಸುವ ಪ್ರಯತ್ನ ನಡೆದಿದೆ.

ಹಾನಗಲ್ ಪೊಲೀಸ್ ಠಾಣೆಗೆ ಈ ಸಂಬಂಧ ಹುಬ್ಬಳ್ಳಿಯ ವಿದ್ಯಾನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.


Spread the love

Leave a Reply

Your email address will not be published. Required fields are marked *