“ಗಿಳಿಯು ಪಂಜರದೊಳಿಲ್ಲ.. ರಾಮ.. ರಾಮಾ..” ಕಿಮ್ಸನಲ್ಲಿ ಕಣ್ಣೀರ ಕೋಡಿ….!

ಹುಬ್ಬಳ್ಳಿ; ರಕ್ತನಾಳದ ತೊಂದರೆಯಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗುವೊಂದು ಚಿಕಿತ್ಸೆ ಫಲಿಸದೇ ಹುಬ್ಬಳ್ಳಿಯ ಕಿಮ್ಸನಲ್ಲಿ ಸಾವಿಗೀಡಾಗಿದ್ದು, ಪಾಲಕರು ಸೇರಿದಂತೆ ಸಂಬಂಧಿಕರು ವೈದ್ಯರ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿಸಿದರು.
ಉಣಕಲ್ ಗ್ರಾಮದ ಸಂಜೀವ ಚೌಧರಿ ಹಾಗೂ ಕೀರ್ತಿ ಚೌಧರಿಯ ಮಗಳಾದ ರಕ್ಷಾಳನ್ನ ಕಿಮ್ಸಗೆ ದಾಖಲು ಮಾಡಲಾಗಿತ್ತು. ಆದರೆ, ಅತೀವವಾದ ರಕ್ತಸ್ರಾವವಾಗಿ ಇಂದು ಬೆಳಗಿನ ಜಾವ ಮಗು ಸಾವಿಗೀಡಾಗಿದೆ. ಇದರಿಂದ ರೋಸಿ ಹೋದ ಪಾಲಕರು, ಕಿಮ್ಸನ ನಿರ್ದೇಶಕ ರಾಮಲಿಂಗಪ್ಪರನ್ನು ತರಾಟೆಗೆ ತೆಗೆದುಕೊಂಡು ಕಣ್ಣೀರಾದರು.
ಇಡೀ ಪ್ರಕರಣ ಹಾಗೂ ಆಸ್ಪತ್ರೆಯಲ್ಲಿ ಮಗು ಹೇಗಿತ್ತು ಎಂಬ ಎಕ್ಸಕ್ಲೂಸಿವ್ ದೃಶ್ಯಾವಳಿಗಳು ಇಲ್ಲಿವೆ ನೋಡಿ…
ಬೆಳ್ಳಂಬೆಳಿಗೆ ಘಟನೆ ವಿಕೋಪಕ್ಕೆ ಹೋಗ ಬಾರದಂತೆ ವಿದ್ಯಾನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನ ನಿಭಾಯಿಸಿದರು. ಮಗುವಿನ ಅಜ್ಜಿಯೋರ್ವರು ಪಿಎಸ್ಐ ಅವರ ಕಾಲು ಮುಗಿಯುವ ದೃಶ್ಯ ಮನಕಲಕುವಂತಿತ್ತು.
ಘಟನೆಯ ಬಗ್ಗೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರದಾನಿ ಅವರು ಮಾತನಾಡಿ, ಕಿಮ್ಸ್ ವೈದ್ಯರಿಂದ ನಿರ್ಲಕ್ಷ್ಯವಾಗಿಲ್ಲ ಎಂದರಲ್ಲದೇ, ಮಗುವಿಗೆ ನೀಡಿರುವ ಚಿಕಿತ್ಸೆ ಬಗ್ಗೆ ವಿವರಿಸಿದರು.