ಮದುವೆಯ ಮುನ್ನಾದಿನ ಹುಬ್ಬಳ್ಳಿಯಲ್ಲಿ ಪೊಲೀಸರೇನು ಮಾಡಿದ್ರು ಗೊತ್ತಾ… ಎಕ್ಸಕ್ಲೂಸಿವ್ ದೃಶ್ಯಾವಳಿಗಳ ಜೊತೆಗೆ…!

ಹುಬ್ಬಳ್ಳಿ: ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಯಾವುದೇ ಕಾರಣಕ್ಕೂ ಹೆಚ್ಚು ಜನರು ಸೇರುವ ಯಾವುದೇ ಕಾರ್ಯಕ್ರಮ ಮಾಡಬಾರದೆಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಮಾಡಿದ್ದರೂ, ಹುಬ್ಬಳ್ಳಿಯಲ್ಲಿ ನಾಳೆ ನಡೆಯಬೇಕಾದ ಮದುವೆಗೆ ಇಂದಿನಿಂದಲೇ ಕಾರ್ಯಕ್ರಮಗಳು ಆರಂಭಗೊಂಡಿದ್ದವು. ಆಗ ಬಿದ್ದಿದೆ ಪೊಲೀಸ್ ರೇಡ್..
ಹೌದು.. ಹುಬ್ಬಳ್ಳಿಯ ಹೊಸೂರಿನ ಶಂಕ್ರಪ್ಪ ನಾಗಪ್ಪ ಚಳಮಟ್ಟಿ ಅವರ ಪುತ್ರ ಆಟೋ ಚಾಲಕ ಚಂದ್ರು ಎಂಬಾತನ ಮದುವೆಯ ಮುನ್ನಾ ದಿನದ ದೇವತಾ ಕಾರ್ಯಕ್ರಮಗಳು ನಡೆದಿದ್ದವು. ಇದೇ ಸಮಯದಲ್ಲಿ ವಿದ್ಯಾನಗರ ಠಾಣೆ ಪೊಲೀಸರು ದಾಳಿ ಮಾಡಿ, ಪ್ರಕರಣ ದಾಖಲು ಮಾಡಿದ್ದಾರೆ.
ಮದುವೆಗೆ ಮುನ್ನವೇ ವರ ಮಹಾಶಯ ಪೊಲೀಸರಿಗೆ ದಂಡವನ್ನ ತುಂಬುವುದಲ್ಲದೇ ಸಂಬಂಧಿಕರನ್ನ ಮನೆಯಿಂದ ಹೊರಗೆ ಕಳಿಸುವ ಸ್ಥಿತಿಯೂ ನಿರ್ಮಾಣವಾಗಿದೆ.
ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದರೂ ಕೂಡಾ, ಸಾರ್ವಜನಿಕರು ಸರಕಾರದ ಆದೇಶವನ್ನ ಮೀರಿ ನಡೆದುಕೊಳ್ಳುವುದು ಮಾತ್ರ ಕಡಿಮೆಯಾಗುತ್ತಿಲ್ಲ.