Posts Slider

Karnataka Voice

Latest Kannada News

ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ “ವೀಡಿಯೋ-ಆಡೀಯೋ” ಪ್ರಕರಣ- ಇಬ್ಬರ ಬಂಧನ…!

Spread the love

ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಯುವತಿಯ ಜೊತೆಗಿದ್ದ ವೀಡಿಯೋ ಮತ್ತು ಆಕೆಯೊಂದಿಗೆ ಮಾತನಾಡಿದ್ದ ಆಡೀಯೋವನ್ನಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದ್ದ ಹಾಗೇ ದೂರು ಬಂದ ಹಿನ್ನೆಲೆಯಲ್ಲಿ ಇಬ್ಬರನ್ನ ಗೋಕುಲ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ.

ಕುಮಾರಸ್ವಾಮಿ ಎಂಬ ಯುವಕ, ಯುವತಿಯೊಂದಿಗಿದ್ದ ವೀಡಿಯೋವನ್ನ ಇಟ್ಟುಕೊಂಡು ಐದು ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದ ಹಲವರ ಪೈಕಿ ಮಂಜು ಕೋಟೆ ಕಲ್ಲೂರ ಹಾಗೂ ರಾಹುಲ ಪ್ರಭು ಎಂಬ ಇಬ್ಬರನ್ನ ಬಂಧನ ಮಾಡಲಾಗಿದ್ದು, ಇನ್ನುಳಿದಂತೆ ಶಕ್ತಿರಾಜ ದಾಂಡೇಲಿ ಸೇರಿದಂತೆ ಹಲವರು ಪರಾರಿಯಾಗಿದ್ದಾರೆ.

ಕುಮಾರಸ್ವಾಮಿ ಎಂಬ ಯುವಕ, ಯುವತಿಯನ್ನ ಪ್ರೀತಿಸುತ್ತಿದ್ದ. ನಂತರ ಯುವತಿಯ ನಡತೆ ಸರಿಯಿಲ್ಲವೆಂದು ದೂರ ಸರಿದಿದ್ದಾನೆ. ಇದರಿಂದ ಯುವತಿ ನಿತ್ಯ ಫೋನ್ ಮಾಡಿ, ಬೈಯ್ಯುವುದು ಮತ್ತು ಮಾತಾಡಿರೋ ಆಡೀಯೋ ಎಲ್ಲರಿಗೂ ಕಳಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಳಂತೆ.

ನಂತರ ಹಲವರು ಸೇರಿಕೊಂಡು ಕುಮಾರಸ್ವಾಮಿಯನ್ನ ಕಾಳಿದಾಸನಗರದ ಹನಮಂತ ದೇವರ ದೇವಸ್ಥಾನದ ಬಳಿ ಕರೆಸಿಕೊಂಡು ಮೊಬೈಲ್, ಬೈಕ್ ಕೀ ಪಡೆದು ರೂಂಗೆ ಕರೆದುಕೊಂಡು ಹೋಗಿ ಥಳಿಸಿದ್ದರೆಂದು ಗೋಕುಲ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಇದೀಗ ಪೊಲೀಸರು ಇಬ್ಬರನ್ನ ಬಂಧನ ಮಾಡಿದ್ದು, ಪ್ರಮುಖ ಆರೋಪಿ ಶಕ್ತಿರಾಜ ದಾಂಡೇಲಿ ಮತ್ತು ಯುವತಿಯ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed