Posts Slider

Karnataka Voice

Latest Kannada News

​”ಸತ್ತ ಸಮಾಜಕ್ಕೆ ಸಾಕ್ಷಿಯಾದ ರಸ್ತೆ ಗುಂಡಿ; ಬದುಕಿರುವ ಮಾನವೀಯತೆಗೆ ಸಾಕ್ಷಿಯಾದ ಧಾರವಾಡದ ಯುವಕ..!”

Spread the love

ಹುಬ್ಬಳ್ಳಿ: ನಗರದ ರಸ್ತೆಗಳು ಗುಂಡಿಮಯವಾಗಿ ಸವಾರರ ಪ್ರಾಣಕ್ಕೆ ಕಂಟಕವಾಗಿದ್ದರೂ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳ ನಡೆಗೆ ಬೇಸತ್ತ ಯುವಕನೋರ್ವ, ತಾನೇ ರಸ್ತೆಗಿಳಿದು ಗುಂಡಿ ಮುಚ್ಚುವ ಮೂಲಕ ವ್ಯವಸ್ಥೆಗೆ ಕನ್ನಡಿ ಹಿಡಿದಿದ್ದಾನೆ.

​ಧಾರವಾಡದ ಮಣಕಿಲ್ಲಾ ನಿವಾಸಿ ಹಾಗೂ ಸಮಾಜ ಸೇವಕ ಮೊಜಿನ್ ಘೀ ವಾಲೆ, ಹುಬ್ಬಳ್ಳಿಯ ಉಣಕಲ್ ಹಾಗೂ ಬೈರಿದೇವರಕೊಪ್ಪದ ಪಿ.ಬಿ. ರಸ್ತೆಯಲ್ಲಿ ಬಿದ್ದಿದ್ದ ಅಪಾಯಕಾರಿ ಗುಂಡಿಗಳನ್ನು ಸ್ವತಃ ಮಣ್ಣು ಹಾಕಿ ಮುಚ್ಚಿದ್ದಾರೆ. ಈ ಭಾಗದಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿದ್ದರೂ ಅಧಿಕಾರಿಗಳು ಗಮನ ಹರಿಸಿರಲಿಲ್ಲ. ಇದನ್ನು ಗಮನಿಸಿದ ಮೊಜಿನ್, ಸಾರ್ವಜನಿಕರ ಸುರಕ್ಷತೆಗಾಗಿ ತಾವೇ ಚೀಲದಲ್ಲಿ ಮಣ್ಣು ತಂದು ಗುಂಡಿಗಳನ್ನು ಬುಚ್ಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

​ಕೋಟಿ ಕೋಟಿ ಅನುದಾನದ ನಡುವೆಯೂ ರಸ್ತೆ ಸರಿಪಡಿಸದ ಪಾಲಿಕೆಯ ಕಾಳಜಿಯನ್ನು ಈ ಯುವಕನ ಕಾರ್ಯ ಪ್ರಶ್ನಿಸುವಂತಿದೆ. ಯುವಕನ ಈ ಜನಪರ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.


Spread the love

Leave a Reply

Your email address will not be published. Required fields are marked *