ಹುಬ್ಬಳ್ಳಿಯ “23”ರ ಯುವಕನ ‘ರಾತ್ರಿಯಾಟ’- ಸೋಮವಾರದ ಹಗಲಿನಲ್ಲೇ ಬಿದ್ದಿತ್ತು ಹೆಣ…

ಧಾರವಾಡ: ಹುಬ್ಬಳ್ಳಿಯ ಆನಂದನಗರದ ಪಾತ್ರೆ ವ್ಯಾಪಾರಿ ಯುವಕನ ಹತ್ಯೆ ಸೋಮವಾರದ ನಡು ಮಧ್ಯಾಹ್ನದಲ್ಲಿ ನಡೆದಿತ್ತಾದರೂ, ಕೊಲೆಪಾತಕರು ಏನು ನಡದೇ ಇಲ್ಲವೆಂಬಂತೆ ಸುಮಾರು 30 ಗಂಟೆಗಳನ್ನ ಕಳೆದು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆಂದು ಗೊತ್ತಾಗಿದೆ.
ಆನಂದನಗರದ ಪಾತ್ರೆ ವ್ಯಾಪಾರಿ ಯುವಕ ರಾಹುಲ, ಆಕಸ್ಮಿಕವಾಗಿ ಧಾರವಾಡದ ಸಾರಸ್ವತಪುರದ ಮಹಿಳೆಯೊಬ್ಬಳ ಮೊಬೈಲ್ ಸಂಖ್ಯೆಯನ್ನ ಸಂಗ್ರಹಿಸಿದ್ದ. ನಂತರ ಆತನ ಕಿರುಕುಳ ಅತಿರೇಕದ ಪರಮಾವಧಿಗೆ ಹೋದಾಗ, ವಿಷಯ ಗಂಡನಿಗೆ ಗೊತ್ತಾಗಿದೆ.
ಈ ಬಗ್ಗೆ ಕೆಲವರಿಗೆ ಹೇಳುವ ಪ್ರಯತ್ನ ಫಲ ನೀಡದೇ ಇದ್ದಾಗ, ಆಕೆಯ ಪತಿ ಮಾರುತಿ, ಮಾತನಾಡುವುದಿದೆ ಎಂದು ಕರೆಸಿಕೊಂಡು ಹೀಗೆ ಮಾಡಿದ್ದಾರೆಂದು ಹೇಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಉಪನಗರ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.