ಗಾಂಧೀಜಿ ಭಾವಚಿತ್ರದ ಮುಂದೆ “ಫುಲ್ ಬಾಟಲ್ ವಿಸ್ಕಿ”- ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ‘ದಾರೂ’ ಹೋರಾಟ…

ಹುಬ್ಬಳ್ಳಿ: ಅವಳಿನಗರದ ಬಹುತೇಕ ಖಾನಾವಳಿ, ಡಾಬಾ ಮತ್ತು ಮನೆಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರೂ ಯಾವುದೇ ಕ್ರಮವನ್ನ ಜರುಗಿಸಿಲ್ಲವೆಂದು ಆರೋಪಿಸಿ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ಸೇನೆ ಹೋರಾಟ ಆರಂಭಿಸಿದೆ.

ಮಹಾತ್ಮಾ ಗಾಂಧೀಜಿಯವರ ಭಾವಚಿತ್ರವನ್ನ ಹಿಡಿದುಕೊಂಡಿರುವ ಹೋರಾಟಗಾರರು, ಅದರ ಮುಂದೆ ವಿಸ್ಕಿ ಬಾಟಲ್ ಇಟ್ಟುಕೊಂಡು ವ್ಯವಸ್ಥೆಯ ಸರಿಪಡಿಸಿ ಎಂದು ಆಗ್ರಹಿಸಿದರು.
ಯಾವುದೇ ಮುಲಾಜಿಲ್ಲದೇ ನಡೆಯುತ್ತಿರುವ ದಂಧೆಯ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದ ಹೋರಾಟಗಾರರು, ಭ್ರಷ್ಟ ಅಧಿಕಾರಿಗಳಿಂದ ಇಂತಹ ಸ್ಥಿತಿ ಬಂದಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಕುಬೇರ ಪವಾರ, ಬಸವರಾಜ ಅಸುಂಡಿ, ಅರುಣ, ಪ್ರಜ್ವಲ್ ರಾವ್, ಆಕಾಶ ಮುಕ್ತಾಪುರ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.