Posts Slider

Karnataka Voice

Latest Kannada News

ಹುಬ್ಬಳ್ಳಿ: ಹಾಡುಹಗಲೇ ಹಿಟ್ ಆ್ಯಂಡ್ ರನ್- ಎರಡು ತುಂಡಾದ ದೇಹ… “R&C” ಏನ್ ಮಾಡ್ತಿದೆ…!!!

1 min read
Spread the love

ಹುಬ್ಬಳ್ಳಿ: ಅವಳಿನಗರದ ಬೈಪಾಸ್‌ನ ಮಾರಣಹೋಮ ನಿರಂತರವಾಗಿ ನಡೆಯುತ್ತಲೇ ಇದ್ದು, ಈಗಷ್ಟೇ ವ್ಯಕ್ತಿಯೋರ್ವನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ವ್ಯಕ್ತಿಯ ದೇಹ ಎರಡು ತುಂಡಾದ ಘಟನೆ ಕಾರವಾರ ರಸ್ತೆಯ ಬಳಿ ಸಂಭವಿಸಿದೆ.

ನವಲೂರ ಮೂಲದ ಸಚಿನ್ ಬೋಸ್ಲೆ ಎಂಬ ವ್ಯಕ್ತಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಮೃತನ ದೇಹವೂ ಡಿಕ್ಕಿಯ ರಭಸಕ್ಕೆ ಎರಡು ತುಂಡಾಗಿದೆ.

ಘಟನೆಯ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿರುವ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು, ಪರಾರಿಯಾಗಿರುವ ವಾಹನದ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಬೈಪಾಸ್‌ನ ಟೋಲ್ ಸಂಗ್ರಹ ಮುಗಿದ ಮೇಲೆ ನಂದಿ ಕಂಪನಿಯವರು ಬಿಟ್ಟು ಹೋಗಿದ್ದ ಸಿಸಿಟಿವಿಗಳನ್ನ, ಈಗ ರಸ್ತೆ ಮಾಡುತ್ತಿರುವ ಆರ್&ಸಿ ಕಂಪನಿಯವರು ತೆಗೆದು ಹಾಕಿದ್ದು, ಡಿಕ್ಕಿ ಹೊಡೆದು ಪರಾತಿಯಾಗುವ ವಾಹನಗಳ ಕುರಿತು ಯಾವುದೇ ಮಾಹಿತಿ ಸಿಗದೇ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.


Spread the love

Leave a Reply

Your email address will not be published. Required fields are marked *