Posts Slider

Karnataka Voice

Latest Kannada News

“ಸಾವಿನ ಹೆದ್ದಾರಿ” ಎಂದೇ ಕುಖ್ಯಾತಿ ಪಡೆದಿದ್ದ “ಹು-ಧಾ” ಬೈಪಾಸ್ “ಟೋಲ್ ಖತಂ”…

1 min read
Spread the love

ಧಾರವಾಡ: ಹುಬ್ಬಳ್ಳಿ ಧಾರವಾಡ ನಗರವನ್ನ ನೇರವಾಗಿ ಬೆಳಗಾವಿ ರಸ್ತೆಗೆ ಸೇರಿಸುವ ಬೈಪಾಸ್ ರಸ್ತೆಯ ಟೋಲ್ ಸಂಗ್ರಹ ಮುಕ್ತಾಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಕೇವಲ ಮೂರು ದಿನ ಮಾತ್ರ ಉಳಿದಿದೆ.

ಕಳೆದ ಕೆಲವು ದಿನಗಳ ಹಿಂದೆ ಟೋಲ್ ಸಂಗ್ರಹದ ದಿನಾಂಕ ಮುಗಿದಿತ್ತಾದರೂ, ಕೆಲವು ಕಾರಣಗಳಿಂದ ಸೆಪ್ಟೆಂಬರ್ 6ರ ವರೆಗೆ ಟೋಲ್ ಹಣ ಸಂಗ್ರಹ ಮಾಡುವುದಕ್ಕೆ ಅವಕಾಶ ನೀಡಲಾಗಿತ್ತು.

ಈಗ ಆ ದಿನವೂ ಬಂದಿರುವುದರಿಂದ ನಂದಿ ಹೈವೇದವರು ತಮ್ಮ ಸಿಬ್ಬಂದಿಗಳಿಗೆ ಧನ್ಯವಾದ ಅರ್ಪಿಸಿ, ನೀವಿನ್ನೂ ಹೊರಡಬಹುದು ಎಂಬ ಸುತ್ತೋಲೆ ರವಾನಿಸಿದ್ದಾರೆ.

ನೂರಾರೂ ಜನರ ಸಾವಿಗೆ ಕಾರಣವಾಗಿರುವ ರಸ್ತೆ ಮಧ್ಯ ಟೋಲ್ ಸಂಗ್ರಹ ನಿಲ್ಲುವುದರಿಂದ ವಾಹನ ಚಾಲಕರು ಮತ್ತಷ್ಟು ಜಾಗೃತರಾಗಿ ಚಾಲನೆ ಮಾಡಬೇಕಾಗತ್ತೆ.


Spread the love

Leave a Reply

Your email address will not be published. Required fields are marked *