ಬಂದ್: ಹುಬ್ಬಳ್ಳಿ-ಧಾರವಾಡದಲ್ಲಿ ಪರಿಸ್ಥಿತಿ ಹೆಂಗಿದೆ… ನೋಡಿ ವೀಡಿಯೋ ಸಮೇತ…!!!

ಹುಬ್ಬಳ್ಳಿ/ಧಾರವಾಡ: ಕಾವೇರಿ ನೀರಿಗಾಗಿ ನಡೆದಿರುವ ಕರ್ನಾಟಕ ಬಂದ್ಗೆ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರ್ವಜನಿಕ ಜೀವನ ಎಂದಿನಂತೆ ನಡೆದಿದೆ.
ಬಂದ್ಗೆ ಬೆಂಬಲವಾಗಿ ನಮ್ಮ ಕರ್ನಾಟಕ ಸೇನೆಯು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶವನ್ನ ವ್ಯಕ್ತಪಡಿಸಿತು.
ಹೋರಾಟದ ವೀಡಿಯೋ..
ಜಿಲ್ಲಾಧ್ಯಕ್ಷ ಅಮೃತ ಇಜಾರಿ ನೇತೃತ್ವದಲ್ಲಿ ಆರಂಭಗೊಂಡ ಹೋರಾಟದಲ್ಲಿ ಸಂಸದರ ವಿರುದ್ಧ ಘೋಷಣೆ ಕೂಗಲಾಯಿತು. ನಮ್ಮ ಹಕ್ಕನ್ನ ಕಸಿದುಕೊಳ್ಳಲು ಬಿಡುವುದಿಲ್ಲವೆಂದು ಆಕ್ರೋಶವ್ಯಕ್ತಪಡಿಸಿದರು.
ಧಾರವಾಡದ ಆಲೂರ ವೆಂಕಟರಾವ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕರ್ನಾಟಕ ಬಂದ್ಗೆ ಬೆಂಬಲ ನೀಡಿದರು.