ಹುಬ್ಬಳ್ಳಿ ASI ದುರ್ಮರಣ ಪ್ರಕರಣ- ಜಂಡು ಕನ್ಸ್ಟ್ರಕ್ಷನ್ ಕಂಪನಿಯ ಪ್ರಾಜೆಕ್ಟ್ ಮ್ಯಾನೇಜರ ಬಂಧನ…
1 min readಹುಬ್ಬಳ್ಳಿ: ಹಳೇ ಕೋರ್ಟ ಸರ್ಕಲ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ಕಾಮಗಾರಿಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಪಾಲಿಸದೆ, ನೌಕರರ ನಿರ್ಲಕ್ಷತನದಿಂದ ಕಬ್ಬಿಣ ಪೈಪ್ ASI ರೊಬ್ಬರ ತಲೆಯ ಮೇಲೆ ಬಿದ್ದು, ಆಸ್ಪತ್ರೆಯಲ್ಲಿ ಉಪಚಾರ ಹೊಂದುವ ವೇಳೆ ಮೃತಪಟ್ಟಿದ್ದರ ಬಗ್ಗೆ ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಈಗಾಗಲೇ ಜಂಡು ಕನ್ಸ್ಟ್ರಕ್ಷನ್ ಕಂಪನಿಯ 3 ಜನ ಇಂಜಿನಿಯರ್ ಸೇರದಂತೆ ಒಟ್ಟು 11 ಜನ ನೌಕರರನ್ನು ಬಂಧಿಸಿ ನ್ಯಾಯಾಲಯಕ್ಕೆ ಪೊಲೀಸರು ಹಾಜಪಡಿಸಿದ್ದರು.
ಈ ಘಟನೆಗೆ ಸಂಬಂಧಪಟ್ಟಂತೆ ಹುಬ್ಬಳ್ಳಿ ಓವರ್ ಪ್ರಾಜೆಕ್ಟ್ ನ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತಿದ್ದ ಜಂಡು ಕಂಪನಿಯ ಪ್ರಾಜೆಕ್ಟ್ ಕೋಆರ್ಡಿನೇಟರ್ ಆಗಿದ್ದ ಹರಿಯಾಣ ರಾಜ್ಯದ ವಿಕಾಸ್ ಶರ್ಮ ಎಂಬಾತನನ್ನು ದಿನಾಂಕ 27.09.2024 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಉಪನಗರ ಠಾಣೆಯ ಎಎಸ್ಐ ನಾಭಿರಾಜ್ ಅವರು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡು, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದರು.