Posts Slider

Karnataka Voice

Latest Kannada News

ಕಾಂಗ್ರೆಸ್ ವರಿಷ್ಠರ ಮೇಲೆ ಗೂಬೆ ಕೂರಿಸಿದ ಅಲ್ತಾಪ ಹಳ್ಳೂರ: ಮಗನ ಮದುವೆಯಾಗಿಲ್ಲದ್ದಕ್ಕೆ ಸೋತ…!

1 min read
Spread the love

ಹುಬ್ಬಳ್ಳಿ: ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ವರಿಷ್ಠರು ತಮ್ಮ ಮಾತು ಕೇಳಿದ್ದರೇ 45 ಸೀಟುಗಳು ಬರುತ್ತಿದ್ದವು. ಅವರು ಮಾತು ಕೇಳದೆ ಇರುವುದರಿಂದ ಕಡಿಮೆ ಸೀಟುಗಳು ಬಂದಿವೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಜಿಲ್ಲಾಧ್ಯಕ್ಷ ಅಲ್ತಾಪ ಹಳ್ಳೂರ, ತಮ್ಮದೇ ಪಕ್ಷದ ವರಿಷ್ಠರ ಮೇಲೆ ಗೂಬೆ ಕೂರಿಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಹಲವು ತಪ್ಪುಗಳಾಗಿವೆ. ನನ್ನ ಮಗನಿಗೆ ಟಿಕೆಟ್ ಕೊಟ್ಟರೂ, ಆತ ಮದುವೆಯೂ ಆಗಿಲ್ಲ ಎನ್ನುವ ಮೂಲಕ ಹಳ್ಳೂರ ಪೇಚಿಗೆ ಸಿಲುಕಿದ್ದರು. ಈ ವೀಡಿಯೋ ನೋಡಿ, ಕಾಂಗ್ರೆಸ್ ನ ಬಂಡವಾಳ ಅವರೇ ಹೊರ ಹಾಕಿದ್ದಾರೆ.

ಪಕ್ಷದಿಂದ ಕೆಲವರಿಗೆ ಟಿಕೆಟ್ ಕೊಡದೇ ಇದ್ದರೂ, ಅವರು ಪಕ್ಷೇತರದಿಂದ ಗೆದ್ದು ಬಂದಿದ್ದಾರೆ. ಅವರನ್ನ ಮತ್ತೆ ಪಕ್ಷಕ್ಕೆ ಕರೆ ತರುವ ಪ್ರಯತ್ನ ಮಾಡಲಾಗುವುದೆಂದು ಅಲ್ತಾಪ ಹಳ್ಳೂರ ಹೇಳಿದರು.


Spread the love

Leave a Reply

Your email address will not be published. Required fields are marked *