Posts Slider

Karnataka Voice

Latest Kannada News

ಬಿಜೆಪಿ ಮುಖಂಡ ಶಂಕರಣ್ಣ ಬಿಜವಾಡ ಮೇಲೆ ಎಫ್ಐಆರ್…!

1 min read
Spread the love

4.36 ನಿಮಿಷದ ವೀಡಿಯೋದಲ್ಲಿ ಸಾಕಷ್ಟು ಅಸಭ್ಯ ಭಾಷೆ ಇರುವುದರಿಂದ ಅದನ್ನ ಹಾಕಲಾಗಿಲ್ಲ. ಕೇಳಲು ಅದು ಸೂಕ್ತವಾಗಿಲ್ಲ.

ಹುಬ್ಬಳ್ಳಿ: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಮಗಳ ಪಾಲನೆಗಳ ಹಲವು ಗೊಂದಲಗಳ ನಡುವೆಯೂ ಹುಬ್ಬಳ್ಳಿಯ ಅಮರಗೋಳ ಎಪಿಎಂಸಿ ಯಾರ್ಡನಲ್ಲಿ ತರಕಾರಿ ಮಾಡುತ್ತಿದ್ದ ವ್ಯಕ್ತಿಯನ್ನ ಸಾರ್ವಜನಿಕವಾಗಿ ಥಳಿಸಿದ ಆರೋಪದ ಮೇಲೆ ಬಿಜೆಪಿ ಮುಖಂಡ ಶಂಕರಣ್ಣ ಬಿಜವಾಡ ಮೇಲೆ ಪ್ರಕರಣ ದಾಖಲಾಗಿದೆ.

ಹುಬ್ಬಳ್ಳಿಯ ಮಂಟೂರ ರಸ್ತೆಯ ಕೃಪಾ ನಗರದ ನಿವಾಸಿ ವಿಶ್ವನಾಥ ಮಲ್ಲೇಶಪ್ಪ ಬೂದೂರು ನೀಡಿದ ದೂರಿನ ಮೇಲೆ ಶಂಕರಣ್ಣ ಬಿಜವಾಡ, ಸಾಧಿಕ ಧಾರವಾಡ ಹಾಗೂ ಬಾಬಾ ಧಾರವಾಡ ಎಂಬುವವರ ಮೇಲೆ ಎಪಿಎಂಸಿ ನವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳೆದ ಎರಡು ಮೂರು ದಿನದ ಹಿಂದೆ ತರಕಾರಿ ಮಾರಾಟ ಮಾಡುತ್ತಿದ್ದವರನ್ನ ವಿಚಾರಣೆ ಮಾಡುತ್ತಿದ್ದ ಸಮಯದಲ್ಲಿ ಹೆಚ್ಚು ಜಾಗದಲ್ಲಿ ಕಾಯಿಪಲ್ಲೆ ಮಾರಾಟ ಮಾಡುತ್ತಿ, ಎಂದು ಶಂಕರಣ್ಣ ಬಿಜವಾಡ ವಿಶ್ವನಾಥ ಬೂದೂರ ಎಂಬುವವರ ಮೇಲೆ ಹಲ್ಲೆ ಮಾಡುವ ಜೊತೆಗೆ ಅವಾಚ್ಯವಾಗಿ ಬೈದಿದ್ದಾರೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಎಪಿಎಂಸಿ ಪ್ರದೇಶದಲ್ಲಿ ತರಕಾರಿ ಮಾರಾಟ ಮಾಡುವ ಸಮಯದಲ್ಲಿ ಬಡಿಗೆ ಹಿಡಿದುಕೊಂಡು, ವ್ಯಾಪಾರಸ್ಥರ ಜೊತೆ ಮಾತಾಡಿ, ಹೊಡೆಯುವ ವೀಡಿಯೋ ಕೂಡಾ ವೈರಲ್ ಆಗಿದ್ದು, ವಿಶ್ವನಾಥ ನೀಡಿದ ದೂರಿಗೆ ಪೂರಕವಾಗಿದೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಎಪಿಎಂಸಿ ಠಾಣೆಯ ಪೊಲೀಸರು, ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಿದ್ದಾರೆ.


Spread the love

Leave a Reply

Your email address will not be published. Required fields are marked *