Posts Slider

Karnataka Voice

Latest Kannada News

“ಯುವರತ್ನ”ನಿಗೆ ಅದ್ಧೂರಿ ಸ್ವಾಗತ ಕೋರುತ್ತಿರುವ “ರಜತ” ಉಳ್ಳಾಗಡ್ಡಿಮಠ…!

Spread the love

ಹುಬ್ಬಳ್ಳಿ: ತಮ್ಮ ತಂದೆಯ ಕಾಲದಿಂದಲೂ ರಾಜುಕುಮಾರ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ ಅವರು, ಇಂದು ಯುವರತ್ನ ಪುನೀತ ರಾಜಕುಮಾರರಿಗೆ ಅದ್ಧೂರಿ ಸ್ವಾಗತ ನೀಡಲು ಮುಂದಾಗಿದ್ದಾರೆ.

ಇಂದು ಸಂಜೆ ಗೋಕುಲ ರಸ್ತೆಯ ಅರ್ಬನ್ ಓಯಾಸಿಸ್ ಮಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಟ ಪುನೀತ ರಾಜಕುಮಾರ ಹಾಗೂ ಡಾಲಿ ಧನಂಜಯ ಸೇರಿದಂತೆ ಹಲವರು ಭಾಗವಹಿಸಲಿದ್ದು, ಕಾಂಗ್ರೆಸ್ ಮುಖಂಡ ರಜತ ಉಳ್ಳಾಗಡ್ಡಿಮಠ, ದೊಡ್ಡ ಬ್ಯಾನರಗಳ ಮೂಲಕ ಅವರನ್ನ ಸ್ವಾಗತಿಸಲು ಮುಂದಾಗಿದ್ದಾರೆ.

ಕನ್ನಡ ಚಿತ್ರರಂಗದ ಹಲವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ರಜತ ಉಳ್ಳಾಗಡ್ಡಿಮಠ, ಪುನೀತ ರಾಜಕುಮಾರ ಅವರ ಯುವರತ್ನ ಸಿನೇಮಾ ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.

ಇಂದು ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಹೆಚ್ಚಿನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿರುವ ರಜತ, ಉತ್ತರ ಕರ್ನಾಟಕದವರಿಗೆ ಆಧ್ಯತೆಯನ್ನ ನೀಡಿರುವ ಚಿತ್ರತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *