ಹುಬ್ಬಳ್ಳಿ: ವಕ್ಫ ಉಪಾಧ್ಯಕ್ಷ ಖೈರಾತಿಯವರಿಗೆ “ಪುಟ್ಟು ಕಂಬಳಿ ಬಳಗ”ದಿಂದ ಸತ್ಕಾರ…

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ವಕ್ಫ ಮಂಡಳಿಗೆ ಉಪಾಧ್ಯಕ್ಷರಾಗಿ ಬೋರ್ಡ್ನಿಂದ ಆಯ್ಕೆಯಾದವರನ್ನ ವಾಣಿಜ್ಯನಗರಿಯಲ್ಲಿ ಆದರದಿಂದ ಸತ್ಕಾರ ಮಾಡಲಾಯಿತು.
ವಕ್ಫ ಮಂಡಳಿಯ ಧಾರವಾಡ ಜಿಲ್ಲಾ ಉಪಾಧ್ಯಕ್ಷರಾಗಿ ಆಯ್ಕೆಯಾದ ದಾದಾಹಯಾತ ಅಬ್ದುಲಹಮೀದ ಖೈರಾತಿ ಅವರನ್ನ ಸತ್ಕರಿಸಿದ ಪುಟ್ಟು ಎಚ್.ಕಂಬಳಿ ಬಳಗ, ಸಮಾಜದ ಐಕ್ಯತೆಗಾಗಿ ಉತ್ತಮ ಕೆಲಸಗಳನ್ನ ಮಾಡಬೇಕೆಂದು ಕೇಳಿಕೊಂಡರು.
ಈ ಸಮಯದಲ್ಲಿ ಬಳಗದ ಪ್ರಮುಖರಾದ ಸಾಯಿಕುಮಾರ ಸವದತ್ತಿ, ಆಸೀಫ ಬಳ್ಳಾರಿ, ಇಮ್ತಿಯಾಜ್ ಕುಮಟಾಕರ, ಯೂಸುಫ್ ಖೈರಾತಿ, ಮುನ್ನಾ ಕುಮಟಾಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.