ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ ವೀಡಿಯೋ ಪ್ರಕರಣ: ಪ್ರತ್ಯಕ್ಷವಾದ ಹುಡುಗಿ…!

ಹುಬ್ಬಳ್ಳಿ: ಯುವತಿಯ ಜೊತೆಗಿನ ಖಾಸಗಿ ವೀಡಿಯೋ ಮಾಧ್ಯಮಗಳಿಗೆ ನೀಡುವುದಾಗಿ ಯುವಕನಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಯುವತಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷವಾಗಿದ್ದಾಳೆ.

ಗೋಕುಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಶಿವಕುಮಾರಸ್ವಾಮಿ ರಾಚಯ್ಯ ಕೊಟಗಿಮಠ ಎಂಬ ಯುವಕನೇ ತನಗೆ ಮದುವೆಯಾಗುವುದಾಗಿ ವಂಚನೆ ಮಾಡಿದ್ದಾನೆ. ತನ್ನನ್ನ ಬಳಕೆ ಮಾಡಿಕೊಂಡಿದ್ದಾನೆ ಎಂದು ವಿದ್ಯಾನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ಬೇರೆಯದೇ ಮಜಲನ್ನ ಪಡೆದಿದೆ.
ಹುಬ್ಬಳ್ಳಿ ಸಿದ್ಧೇಶ್ವರನಗರದ ಕಾಳಿದಾಸನಗರದ ನಿವಾಸಿಯಾಗಿರುವ ಮತ್ತು ನರ್ಸ್ ಕೆಲಸ ಮಾಡುವ ಯುವತಿಯೇ ವಿದ್ಯಾನಗರ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ ತನಗಾದ ಅನ್ಯಾಯವನ್ನ ಹೇಳಿಕೊಂಡು, ಕೆಲವರು ಮಧ್ಯಸ್ತಿಕೆ ವಹಿಸಲು ಬಂದಿದ್ದರೆಂದು ಹೇಳಿಕೊಂಡಿದ್ದಾಳೆ.
ದೂರು ಪಡೆದ ಪೊಲೀಸರು ವಿದ್ಯಾನಗರ ಠಾಣೆ ಪೊಲೀಸರು ಯುವತಿಯ ಮೆಡಿಕಲ್ ಚೆಕಪ್ ಮಾಡಿಸಿ, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.