ಹುಬ್ಬಳ್ಳಿ- “ಗುದದ್ವಾರದಲ್ಲಿ ವ್ಯಾಕ್ಯೂಂ ಕ್ಲೀನರ್” ಸಿಕ್ಕಿಸಿಕೊಂಡ ಭೂಪ…!

ಹುಬ್ಬಳ್ಳಿ: ವಿದ್ಯಾನಗರದಲ್ಲಿನ ಪ್ರತಿಷ್ಠಿತ ಕಾಲೇಜಿನಲ್ಲಿ ಕಾರ್ಯನಿರ್ವಹಿಸಲು ಬಂದಿದ್ದ ಕಾರ್ಮಿಕನೋರ್ವ ಗುದದ್ವಾರದಲ್ಲಿ ವ್ಯಾಕ್ಯೂಂ ಕ್ಲೀನರ್ ಸಿಕ್ಕಿಸಿಕೊಂಡು ಆಸ್ಪತ್ರೆಗೆ ದಾಖಲಾದ, ಅನಾಹುತಕಾರಿ ಪ್ರಕರಣವೊಂದು ಸಂಭವಿಸಿದೆ.
ಕೊಲ್ಕೋತ್ತಾ ಮೂಲದ ಕಾರ್ಮಿಕ ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ರಾತ್ರಿ ಸಮಯದಲ್ಲಿ ವ್ಯಾಕ್ಯೂಂ ಕ್ಲೀನರ್ ನ್ನ ತನ್ನ ಗುದದ್ವಾರದಲ್ಲಿಟ್ಟುಕೊಂಡು ಆರಂಭಿಸಿದ್ದಾನೆ. ಇದರಿಂದ ಒಳ ನುಗ್ಗಿರುವ ವ್ಯಾಕ್ಯೂಂ ಕ್ಲೀನರ್ ಪೈಪ್ ಸಮೇತ ಚಿಕಿತ್ಸೆಗಾಗಿ ದಾಖಲಾಗಿದ್ದಾನೆ.
ಹುಬ್ಬಳ್ಳಿಯ ಕಿಮ್ಸನ ತುರ್ತು ಚಿಕಿತ್ಸಾ ಘಟಕದಲ್ಲಿಟ್ಟು ಕಾರ್ಮಿಕನಿಗೆ ಚಿಕಿತ್ಸೆಯನ್ನ ನೀಡಲಾಗುತ್ತಿದ್ದು, ಆಪರೇಷನ್ ಮಾಡಿಯೇ ವ್ಯಾಕ್ಯೂಂ ಕ್ಲೀನರ್ ಪೈಪ್ ತೆಗೆಯಬೇಕೆಂದು ವೈಧ್ಯರು ತಿಳಿಸಿದ್ದಾರೆ.
ಇಂತಹದಕ್ಕೆ ಕಾರ್ಮಿಕ ಏಕೆ ಮುಂದಾದ ಎಂಬುದು ಇನ್ನೂ ಗೊತ್ತಾಗಿಲ್ಲ. ಘಟನೆಯಿಂದ ತೀವ್ರವಾಗಿ ಗಲಿಬಿಲಿಗೊಂಡು ಮಾತನ್ನೇ ನಿಲ್ಲಿಸಿರುವ ಕಾರ್ಮಿಕ ಸ್ಥಿತಿ ಅಯೋಮಯವಾಗಿದೆ.