ಹುಬ್ಬಳ್ಳಿ: ಸಿಸಿಬಿ “ಟ್ರೇಸ್ಔಟ್”- ಗಣೇಶ ಜಗನ್ನಾಥ ಬದ್ದಿ ‘ಅಂದರ್’…

ಹುಬ್ಬಳ್ಳಿ:ಸಿಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ
90000/- ಮೌಲ್ಯದ ಮಧ್ಯ ವಶಕ್ಕೆ ಪಡೆದಿದ್ದು, ಕಾರ್ಯಾಚರಣೆಯು ಎಸಿಪಿ ಎಸ್.ಟಿ.ಒಡೆಯರ್ ಹಾಗೂ ಇನ್ಸ್ಪಕ್ಟರ್ ಮಾರುತಿ ಗುಳ್ಳಾರಿ ನೇತೃತ್ವದಲ್ಲಿ ನಡೆದಿದೆ.
ಇಲ್ಲಿನ ಹಳೇಹುಬ್ಬಳಿಯ ಶಿವಸೋಮೇಶ್ವರ ನಗರದ ಮಾವುನೂರ ರಸ್ತೆಯ ಬಳಿ, ಖಚಿತವಾದ ಮಾಹಿತಿ ಮೇರೆಗೆ ಸಿಸಿಬಿ ಎಸಿಪಿ ಎಸ್ ಟಿ ಒಡೆಯರ ಅವರ ನೇತೃತ್ವದಲ್ಲಿ ಪೊಲೀಸರು ನಡೆಸಿದ ದಾಳಿಯಲ್ಲಿ ಸುಮಾರು 90,000/- ಮೌಲ್ಯದ ಮಧ್ಯವನ್ನು ವಶಪಡಿಸಿಕೊಂಡು, ಆರೋಪಿ ಗಣೇಶ ಜಗನ್ನಾಥ ಬದ್ದಿ ಸಮೇತ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸೆಕ್ಟರ್ ಮಾರುತಿ ಗುಳ್ಳಾರಿ, ಬಿ.ಎನ್.ಲಂಗೋಟಿ, ಐ.ಕೆ.ಧಾರವಾಡ, ಎ.ಹೆಚ್.ಹುಗ್ಗಿ, ಆರ್.ಎಸ್.ಗುಂಜಾಳ, ಮಾರುತಿ ಭಜಂತ್ರಿ ಕಡೆಮನಿ ಸೇರಿದಂತೆ ಮತ್ತಿತರರು ಇದ್ದರು.